‘ಶ್ರೀ ಗುರುರಾಜ ಮಂದಿರಂ’ ವಾರ್ಷೀಕೋತ್ಸವ ಸಮಾರಂಭ

‘ಶ್ರೀ ಗುರುರಾಜ ಮಂದಿರಂ’ ವಾರ್ಷೀಕೋತ್ಸವ ಸಮಾರಂಭ ‘Sri Gururaja Mandiram’ anniversary celebration

ಲೋಕದರ್ಶನ ವರದಿ 

ಬೆಳಗಾವಿ 06: ದಿ. ಕಲ್ಲೋಪಂತ ಅಚ್ಯುತ ಪಾಟೀಲ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿರುವ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ‘ಶ್ರೀ ಗುರುರಾಜ ಮಂದಿರಂ’ ದ 53 ನೇ ವಾರ್ಷೀಕೋತ್ಸವ ಸಮಾರಂಭವನ್ನು ಇದೇ ದಿನಾಂಕ 7 ಶನಿವಾರದಂದು ಶ್ರೀ ಗುರುರಾಜ ಮಂದಿರದಲ್ಲಿ ನಡೆಯಲಿದೆ. 

ಇದೇ ಸಂದರ್ಭದಲ್ಲಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಕೂಡ್ಲಿ ಆರ್ಯ ಅಕ್ಷೊಭ್ಯ ಮಠಾಧೀಶರಾದ ಶ್ರೀ ರಘು ವಿಜಯತೀರ್ಥ ಶ್ರೀಪಾದಂಗಳರಿಂದ ಶ್ರೀ ವೈಕುಂಠ ರಾಮದೇವರ ಸಂಸ್ಥಾನ ಪೂಜೆ ನೆರವೇರಲಿದೆ. ಸದ್ಭಕ್ತರು ಈ ಕಾರ‌್ಯಕ್ರಮದಲ್ಲಿ ಭಾಗಲ್ಗೊಂಡು ಗುರುಗಳ ಪ್ರೀತಿಗೆ ಪಾತ್ರರಾಗಬೇಕೆಂದು ರಾಘವೇಂದ್ರ ಪಾಟೀಲ, ಧೀರೇಂದ್ರ ಪಾಟೀಲ, ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಅಚ್ಯುತ ಪಾಟೀಲ ಮೊ. 9591754066 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.