ಜಾನಪದ ಕಲೆ ಉಳಿಸಿ ಬೆಳೆಸಲು ಶಕುಂತಲಾ ಮಹಾಮನೆ ಕರೆ
ಧಾರವಾಡ 26: ನಮ್ಮ ಹಿರಿಯರು ಅಕ್ಷರ ಜ್ಞಾನವಿಲ್ಲದೆ ಬಾಯಿಂದ ಬಾಯಿಗೆ ಜಾನಪದ ಹಾಡಿನ ಮೂಲಕ ಕಲೆಯನ್ನು ಹಂಚಿ ಶ್ರೀಮಂತಿಕೆ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಯುಗದಲ್ಲಿ ಜಾನಪದ ಕಲೆಯನ್ನು ನಾವೆಲ್ಲರೂ ಉಳಿಸಿ ಬೆಳಸಬೇಕಿದೆ ಎಂದು ಶಕುಂತಲಾ ಮಹಾಮನೆ ಹೇಳಿದರು.
ಇಲ್ಲಿನ ವೀರಶೈವ ಜಾಗೃತ ಮಹಿಳಾ ಸಮಿತಿ ಟೌನ್ಹಾಲ್ ನಡಕಟ್ಟಿ ಸಭಾಭವನದಲ್ಲಿ ಶಿವಲೀಲ ಗುಡಗುಂಟ ದತ್ತಿ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಜಾನಪದ ಸಮೂಹ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರದೇಶದಿಂದ ಪ್ರದೇಶಕ್ಕೆ ಜಾನಪದ ಸಾಹಿತ್ಯ ಬೇರೆ ಬೇರೆ ಆಗಿರುತ್ತದೆ. ಕರ್ನಾ ಟಕ ಕಾಲೇಜಿನ ಡಾ. ಎ.ಎಲ್ ದೇಸಾಯಿ ಮಾತನಾಡಿ, ಕರ್ನಾ ಟಕ ವಿಶ್ವವಿದ್ಯಾಲಯ ಹಾಗೂ ಕಾಲೇಜು ಕೂಡ ಜಾನಪದ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಂತಾ ಹೊಸುರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಜಾನಪದ ಸಮೂಹ ಗಾಯನ ಸ್ಪರ್ಧೆ ಯಲ್ಲಿ 16 ಮಹಿಳಾ ಮಂಡಳಿಗಳು, ಸದಸ್ಯರು ಭಾಗವಹಿಸಿದ್ದರು. ಸ್ಪರ್ಧೆ ಯಲ್ಲಿ ಸನ್ಮತಿ ಸಖಿ ಬಳಗ ಪ್ರಥಮ, ಜಾನಪದ ಸಂಶೋಧನಾ ಕೇಂದ್ರ ಮಹಿಳಾ ಮಂಡಳಿ ದ್ವೀತಿಯ ಹಾಗೂ ಅಕ್ಕನ ಬಳಗ ತೃತೀಯ ಸ್ಥಾನ ಪಡೆದುಕೊಂಡವು. ಆರಂಭದಲ್ಲಿ ಉಪಾಧ್ಯಕ್ಷೆ ನಳನಾಕ್ಷಿ ಅರಳಗುಪ್ಪಿ ಸ್ವಾಗತಿಸಿದರು. ಕಲ್ಪನಾ ಕಟಗಿ ಅತಿಥಿಗಳ ಪರಿಚಯ ಮಾಡಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 