ಇಂಡಿ: ಮೂಡನಂಬಿಕೆಯಿಂದ ಮಗನ ದೇಹವನ್ನು ಮಣ್ಣಿನಲ್ಲಿ ಹೂತ ಪಾಲಕರು
ಲೋಕದರ್ಶನ ವರದಿ
ಇಂಡಿ 26: ಅಂಗವಿಕಲತೆ ನಿವಾರಣೆಯಾಗುತ್ತದೆ ಎಂದು ನಂಬಿ 23 ವರ್ಷದ ಅಂಗವಿಕಲ ಮಗನಿಗೆ ಪಾಲಕರು ಸೂರ್ಯಗ್ರಹಣದ ದಿನ ನೆಲದಲ್ಲಿ ಗುಂಡಿ ತೋಡಿ ಕುತ್ತಿಗೆಯವರೆಗೂ ಹೂತಿಟ್ಟ ಘಟನೆ ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ನಡೆದಿದೆ.
ಪಾಪು ಕುತ್ಬುದ್ದೀನ ಮುಲ್ಲಾ (23) ವಿಕಲಚೇತನರಾಗಿರುವದರಿಂದ ಈ ಕಂಕಣ ಸೂರ್ಯಗ್ರಹಣ ಅತ್ಯಂತ ವಿಶೇಷವಾಗಿದ್ದು ಗ್ರಹಣ ಸಂಭವಿಸಿದಾಗ ಯಾವುದೇ ಆಗದೆ ಇರುವ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆಯಿಂದ ಗ್ರಾಮದ ಹಲವರ ಮಾತು ಕೇಳಿ ಪಾಲಕರು ಈ ಕಾರ್ಯ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಸ್ನೇಹಲ ಸುಧಾಕರ ಲೋಖಂಡೆ ಕಾರ್ಯಾಲಯದ ಶಿರಸ್ತೆದಾರ ಎ.ಬಿ ಬಣಕಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ವಿಕಲಚೇತನ ಪಾಪು ಕುತ್ಬದ್ದೀನ ಈತನಿಗೆ ಮನ ಒಲಿಸಿ ಮಣ್ಣಿನಲ್ಲಿ ಹೂತು ಕೂಡಬಾರದು ಇದರಿಂದ ಮತ್ತೆ ಏನಾದರೂ ಅನಾಹುತಗಳು ಸಂಭವಿಸುವ ಲಕ್ಷಣಗಳು ಹೆಚ್ಚು ಎಂದು ಹೇಳಿ ತಿಳುವಳಿಕೆ ಹೇಳಿ ಆತನನ್ನು ಹೊರತೆಗೆಸಿದ್ದಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 