ತಂಬಾಕು ಮುಕ್ತ ಸಮಾಜ ನಿರ್ಮಾನಕ್ಕೆ ಯುವಜನತೆ ಕೈಜೋಡಿಸಬೇಕು: ಡಾ.ಪ್ರಮೋದ ಸಿಂದಗಿ
Youth should join hands in building a tobacco-free society: Dr. Pramoda Sindagi
ಯರಗಟ್ಟಿ, 02 : ತಂಬಾಕು ಮುಕ್ತ ಸಮಾಜ ನಿರ್ಮಾನಕ್ಕೆ ಯುವಜನತೆ ಕೈಜೋಡಿಸಬೇಕು. ತಂಬಾಕು ಸೇವನೆಯಿಂದ ಸಾಮಾಜಿಕ ಮತ್ತು ದೈಹಿಕ ಸ್ವಾಸ್ಥ್ಯ ಹಾಳಾಗುತ್ತಿದ್ದು, ತಡೆಗಟ್ಟಲು ಯುವ ಜನತೆ ಮುಂದಾಗಬೇಕು ಎಂದು ವೈದ್ಯಾಧಿಕಾರಿ ಡಾ.ಪ್ರಮೋದ ಸಿಂದಗಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರುಷರಲ್ಲಿ ತಂಬಾಕು ಸೇವನೆಯಿಂದ ಸಂತಾನ ಹೀನತೆಗೆ ಕಾರಣವಾಗಬಹುದು ಎಂದರು.
ಶುಶ್ರೂಷಾಧಿಕಾರಿ ವಿರೇಶ ದೇಮಶೇಟ್ಟಿ ಮಾತನಾಡಿ, ದುಶ್ಚಟಗಳು ಮಕ್ಕಳ ಬದುಕನ್ನು ನಾಶಮಾಡುತ್ತವೆ. ತಂಬಾಕು ವಿರೋಧಿ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಇತರರಿಗೆ ವ್ಯಸನಗಳಿಂದ ದೂರವಿರಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಹಲಗಲಿ, ಪಾರ್ಮಸಿ ಅಧಿಕಾರಿ ಆರತಿ ಹೊಳ್ಳಿಕೇರಿ, ಎಲ್ಟಿಒ ಶಶಿಧರ ಉಪ್ಪಿನ, ವಸಂತ ಚವ್ಹಾನ, ಗೀತಾ ಪೋಳ, ಜಿ.ಪಿ.ಹೊಂಗಲ, ಶಂಕರ ಲಮಾಣಿ, ಮಹಾವೀರ ಜೊಡಟ್ಟಿ, ರಾಜೇಶ್ವರಿ ನಾಯ್ಕರ, ಬಸವ್ವ ಕುಂಬಾರ, ನೀಲವ್ವ ಬೆನಕಟ್ಟಿ, ಶೋಭಾ ಚುಳಕಿ, ಶಾಂತವ್ವ ಜಡೆಯರ, ಮಹಾದೇವಿ ಬಾರ್ಕಿ, ಬೀಮವ್ವ ಬಜಂತ್ರಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 