ಮಲಪ್ರಭಾ ನದಿಯಲ್ಲಿ ಈಜಲು ಹೋಗಿ ಯುವಕ ಸಾವು: ಶೋಧ ಕಾರ್ಯ

ಮಲಪ್ರಭಾ ನದಿಯಲ್ಲಿ ಈಜಲು ಹೋಗಿ ಯುವಕ ಸಾವು: ಶೋಧ ಕಾರ್ಯ  Youth dies after going swimming in Malaprabha river: Search underway

ಸವದತ್ತಿ 10 : ಮಲಪ್ರಭಾ ನದಿಯ ಜಾಕವೇಲ್ ಬಳಿ ಈಜಲು ಹೋದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದ ದುರ್ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ನಗರದ ರಾಮಾಪೂರಸೈಟ್ ನಿವಾಸಿ ಮುಸ್ತಕೀಮ ಇಮಾಮಸಾಬ ಮುಜಾವರ (17) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಯುವಕನ ಪೋಷಕರು ಮದುವೆ ಸಮಾರಂಭವೊಂದಕ್ಕೆ ತೆರಳಿದ್ದ ಸಮಯದಲ್ಲಿ, ಮುಸ್ತಕೀಮ ಶನಿವಾರ ಮಧ್ಯಾಹ್ನ ನದಿಗೆ ಈಜಲು ತೆರಳಿದ್ದನು. ಈ ವೇಳೆ ನೀರಿನಲ್ಲಿ ಸಿಲುಕಿದ ಆತ ಕ್ಷಣಾರ್ಧದಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬೆಳಗಾವಿಯ ರೆಸ್ಕ್ಯೂ ತಂಡದವರು ನದಿಯಲ್ಲಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೃತದೇಹ ಇನ್ನೂ ಪತ್ತೆಯಾಗಿಲ್ಲ.  

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.ಬಳಿಕ ಮಕ್ತುಮ ತಹಶೀಲ್ದಾರ ಮಾತನಾಡಿದ ಅವರು ಜಾಕವೇಲ್ ಬಳಿ ಪ್ರತಿ ವರ್ಷವೂ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ವಿಷಾದನೀಯ. ಬೇಸಿಗೆಯ ರಜೆ ಅವಧಿಯಲ್ಲಿ ಮಕ್ಕಳು ಮತ್ತು ಯುವಕರು ನದಿಗೆ ಇಳಿಯುವುದು ಹೆಚ್ಚು. ಹೀಗಾಗಿ ಇಂತಹ ಅಪಾಯಕಾರಿ ಪ್ರದೇಶಗಳಿಗೆ ಕೂಡಲೇ ತಂತಿ ಬೇಲಿ ಅಳವಡಿಸಬೇಕು ಎಂದು  ಸವದತ್ತಿ ನಗರಕ್ಕೆ ಸುಸಜ್ಜಿತ ಈಜುಕೊಳದ ವ್ಯವಸ್ಥೆಯಾದರೆ ಯುವಕರು ನದಿಗೆ ಇಳಿಯುವುದು ತಪ್ಪುತ್ತದೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಆಡಳಿತ ಮಂಡಳಿ ಶಾಶ್ವತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.