ಯೋಗ ಶಿಕ್ಷಣದಿಂದ ಆತ್ಮ ಬಲ ವೃದ್ಧಿಸುತ್ತದೆ. : ಸುರೇಶ ಮುದ್ದಾರ
Yoga education increases self-strength: Suresh Muddara
ಲೋಕದರ್ಶನ ವರದಿ
ಗೋಕಾಕ 20 : ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪುಗೊಳ್ಳಲು ಯೋಗ ಸಹಕಾರಿಯಾಗಿದ್ದು ಆ ಕಲಿಕೆಯಿಂದ ಆತ್ಮಬಲ ವೃದ್ಧಿಸುತ್ತದೆ ಎಂದು ಸುರೇಶ ಮುದ್ದಾರ ಹೇಳಿದರು ಅವರು ವಿವೇಕಾನಂದ ನಗರದ ಜೆ.ಸಿ.ಐ ಸಭಾಂಗಣದಲ್ಲಿ ಶ್ರೀ ವಿವೇಕಾನಂದ ಯೋಗ ಮತ್ತು ಸಂಸ್ಕೃತಿ ವಿಕಾಸ ಸಂಘದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಉದ್ದೇಶಿಸಿ ಮಾತನಾಡುತ್ತ ದೈಹಿಕ ಹಾಗೂ ಮಾನಸಿಕ ಸಧೃಡತೆಗೆ ಯೋಗ ಶಿಕ್ಷಣ ಉಪಕಾರಿಯಾಗಿದ್ದು ನೈತಿಕತೆಯೂ ಹೆಚ್ಚಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜೆ.ಸಿ.ಐ ರಾಷ್ಟ್ರೀಯ ವಿಭಾಗೀಯ ಸಂಚಾಲಕ ಹಾಗೂ ವಕೀಲ ವಿಷ್ಣು ಲಾತೂರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿರಿಯ ಬಯಲಾಟ ಕಲಾವಿದ ಈಶ್ವರಚಂದ್ರ ಬೆಟಗೇರಿ, ಸಾಹಿತಿ ಜಯಾನಂದ ಮಾದರ, ವೈದ್ಯ ಪ್ರಮೋದ ಎತ್ತಿನಮನಿ, ಮುಖ್ಯೋಪಾಧ್ಯಾಯ ಈರಣ್ಣ ಕಡಕೋಳ, ಕಿರಣ ಗಂಗರಡ್ಡಿ ವೇದಿಕೆ ಮೇಲೆ ಉಪಸ್ಥತರಿದ್ದರು. ಮೂಡಬಿದರೆ ಆಳ್ವಾಸ ಶಿಕ್ಷಣ ಸಂಸ್ಥೆಗೆ ಆಯ್ಕೆಯಾದ ಕು.ಶ್ರದ್ಧಾ ಕಾಳಪ್ಪಾ ಕಮ್ಮಾರ ಮತ್ತು ಸಾನ್ವಿ ಗುರು ಬಬಲಿ ಪಾಲಕರ ಸಮೇತ ಗೌರವ ಸನ್ಮಾನ ನೀಡಲಾಯಿತು. ಯೋಗ ಶಿಕ್ಷಕ ಆನಂದ ಸೋರಗಾವಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸ್ವಾತಿ ಮಗದುಮ್ಮ ಸ್ವಾಗತಿಸಿ. ಚೈತ್ರಾ ಕಮ್ಮಾರ ನಿರೂಪಿಸಿ. ಅಂಜನಾ ಸೋರಗಾವಿ ವಂದಿಸಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 