ದಮನಿತರ ಸಾಹಸ ಶೌರ್ಯ ಅನಾವರಣಗೊಳಿಸಿದ ಯ.ರು.ಪಾಟೀಲ
Y.R. Patil Unveils the Valor and Heroism of the Oppressed
ಲೋಕದರ್ಶನ ವರದಿ
ಬೆಳಗಾವಿ 06: ಸ್ವಾತಂತ್ರ್ಯ ಸಂದರ್ಭದಲ್ಲಿ ತಳಸಮುದಾಯ ಶ್ರಮಿಕರ ತ್ಯಾಗ ಬಲಿದಾನ ಬಹಳವಾಗಿದೆ. ಆದರೆ ಇಂತಹ ಮಹನೀಯರು ಬೆಳಕಿಗೆ ಬಾರದೇ ಅವರ ಚರಿತ್ರೆ ಕತ್ತಲೆಯಲ್ಲಿಯೇ ಉಳಿದಿದ್ದು, ಅಕ್ಷರ ಬಲ್ಲವರ ಚರಿತ್ರೆ ಮಾತ್ರ ದಾಖಲೆಯಾಗಿ ಬೆಳಕಿಗೆ ಬಂದಿವೆ. ಇಂತಹವರ ಪೈಕಿ ಬೆಳವಡಿಯ ವಡ್ಡರ ಯಲ್ಲಣ್ಣ ಪ್ರಮುಖ ವ್ಯಕ್ತಿ. ಈತನ ಕುರಿತು ಅಚ್ಚುಕಟ್ಟಾದ ಕಾದಂಬರಿ ಬರೆಯುವ ಮೂಲಕ ಬೆಳಕಿಗೆ ತಂದ ಬೆಳಗಾವಿಯ ಚಾರಿತ್ರಿಕ ಕಾದಂಬರಿಕಾರರೆಂದೇ ಹೆಸರಾದ ಯ.ರು.ಪಾಟೀಲರು ಅಭಿನಂದನಾರ್ಹರು ಎಂದು ವಿಧಾನ ಪರಿಷತ್ತ ಮಾಜಿ ಮುಖ್ಯ ಸಚೇತಕರು ಹಾಗೂ ಕೆ.ಎಲ್.ಇ. ಉಪಾಧ್ಯಕ್ಷ ಮಹಾಂತೇಶ ಕವಟಗಿಮಠ ಅವರು ಹೇಳಿದರು.
ವಡ್ಡರ ಯಲ್ಲಣ್ಣ ಯುವ ವೇದಿಕೆ ಹಾಗೂ ನೆಹರು ನಗರದ ಕನ್ನಡ ಭವನ ವತಿಯಿಂದ ಬೆಳಗಾವಿ ಮಹಾನಗರ ಮಟ್ಟದ ವಡ್ಡರ ಸಮಾಜ ಸಮಾವೇಶ ನಿಮಿತ್ಯ ಚಾರಿತ್ರಿಕ ಕಾದಂಬರಿಕಾರರು ನಿವೃತ್ತ ತಹಸೀಲದಾರ ಯ.ರು.ಪಾಟೀಲರವರು ರಚಿಸಿದ ‘ನೆಲದೊಡಲ ಧ್ವನಿ ಶೂರ ಬೆಳವಡಿ ವಡ್ಡರ ಯಲ್ಲಣ್ಣ’ ಕಾದಂಬರಿಯನ್ನು ಜನಾರೆ್ಣಗೊಳಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ವಡ್ಡರ ಸಮಾಜದ ಪ್ರಧಾನ ಕಾರ್ಯದರ್ಶಿ ಡಾ. ಚೌಡಯ್ಯನವರು ಮಾತನಾಡುತ್ತ, ನಮ್ಮ ಸಮಾಜದ ಜನರಿಗೆ ನಮ್ಮ ಶೂರರ ಪರಿಚಯವಿಲ್ಲದ ಸಂದರ್ಭದಲ್ಲಿ 35 ವರ್ಷದಿಂದ ಗೆಳೆತನವಿರುವ ಯ.ರು.ಪಾಟೀಲರವರು ವಡ್ಡರ ಯಲ್ಲಣ್ಣನ ಕುರಿತು ಕೃತಿ ಬರೆದು ಮಹದುಪುಕಾರ ಮಾಡಿದ್ದಾರೆಂದು ಹೇಳುತ್ತ, ವಡ್ಡರ ಸಂಘಟನೆ, ಸರಕಾರದಿಂದ ಸಿಗುವ ಸೌಲಭ್ಯ, ಹಾಗೂ ಸಮಾಜದ ತವಕ ತಲ್ಲಣಗಳನ್ನು ಸಂಕ್ಷಿಪ್ತವಾಗಿ ಹೇಳಿದರು.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 