ಭಯಮುಕ್ತವಾಗಿ ಪರೀಕ್ಷೆ ಬರೆಯಿರಿ: ಅರ್ಜುನ ರಾಠೋಡ

ಭಯಮುಕ್ತವಾಗಿ ಪರೀಕ್ಷೆ ಬರೆಯಿರಿ: ಅರ್ಜುನ ರಾಠೋಡ Write the exam fearlessly: Arjuna Rathoda

ತಾಳಿಕೋಟಿ  07: ಸರ್ಕಾರ ಮಾದರಿ ಉತ್ತರ ಸಹಿತ  ಪ್ರೆಶ್ನೆ ಪತ್ರಿಕೆಗಳು ಮತ್ತು ಪೂರ್ವ ಸಿದ್ದತಾ ಸರಣಿ ಪರೀಕ್ಷೆಗಳಿಂದಾಗಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದೆ ,ಪಠ್ಯದ ಜೊತೆಗೆ ಎಲ್‌.ಬಿ.ಎ ಸಮಗ್ರವಾಗಿ ಅರ್ಥೈಸಿಕೊಳ್ಳಿ ಎಂದು ಮುಕಿಹಾಳ ಸರ್ಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕ ಅರ್ಜುನ ರಾಠೋಡ ಮಕ್ಕಳಿಗೆ ಕಿವಿಮಾತು ಹೇಳಿದರು. ಅವರು ಪಟ್ಟಣದ ಎಸ್‌.ಕೆ.ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ಅತಿಥಿಯಾಗಿ ಬಂದು  ಎಸ್‌.ಎಸ್‌.ಎಲ್‌.ಸಿ. ಹಿಂದಿ ವಿಷಯದಲ್ಲಿ ಸಮರ್ಥವಾಗಿ ಉತ್ತರ ಬರೆಯುವ ಕುರಿತು ಮಕ್ಕಳಿಗೆ ಬೋಧನೆ ಮಾಡುತ್ತ ಹೀಗೆ ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಡಾ.ಅನಿಲಕುಮಾರ ಇರಾಜ,ಶಿಕ್ಷಕಿ ಪಿ.ಬಿ.ದೇಶಮುಖ, ಎಮ್‌.ಎಮ್‌.ಕಾಂಬಳೆ,ಪಿ.ಪಿ.ಬಸರಕೋಡ,ಎನ್‌.ವಾಯ್‌.ಕೇಸರಿ, ಪಿ.ಎಮ್‌.ಬೆಳಗಲ್ಲ, ಆಯ್‌.ಎಮ್‌.ಕುಂಬಾರ ಸಹನಾ ಕಶೆಟ್ಟಿ,ಎಮ್‌.ವಾಯ್‌.ಚಲವಾದಿ ಇದ್ದರು.