ಗುರುಗಳಿಂದ ಎರಡು ಕಾಲುವೆಗಳಿಗೆ ಪೂಜೆ

ಗುರುಗಳಿಂದ ಎರಡು ಕಾಲುವೆಗಳಿಗೆ ಪೂಜೆ  Worship of two canals by the Guru

ಹೊಸಪೇಟೆ-ವಿಯನಗರ 10: ಈ ದಿನ ತುಂಗಭದ್ರ ಬೋರ್ಡ್‌ನ ಮುಖ್ಯ ಕಾರ್ಯದರ್ಶಿಗಳಾದ ಓ.ಆರ್‌.ಕೆ.ರೆಡ್ಡಿಯವರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾರಾಯಣನಾಯಕ ಮತ್ತು ಇತರೆ ಇಂಜಿನಿಯರ್‌ಗಳು ಹಾಗೂ ತುಂಗಭದ್ರ ರೈತ ಸಂಘದ ಪದಾಧಿಕಾರಿಗಳೊಂದಿಗೆ ಬೆಳಿಗ್ಗೆ : 09:15 ನಿ., ತುಂಗಭದ್ರ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆ (ಎಲ್‌.ಎಲ್‌.ಸಿ).ಗೆ ಮತ್ತು ಬೆಳಿಗ್ಗೆ : 10:15 ನಿ., ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ (ಹೆಚ್‌.ಎಲ್‌.ಸಿ). ಗುರುಗಳಿಂದ ಪೂಜೆಯನ್ನು ನೆರೆವೇರಿಸಿ ನೀರು ಬಿಡಲು ಪ್ರಾರಂಭಿಸಿರುತ್ತಾರೆ. ಕಾರಣ ಎರಡು ಕಾಲುವೆಗಳ ರೈತರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ತುಂಗಭದ್ರ ರೈತ ಸಂಘದಿಂದ ವಿನಂತಿಸುತ್ತೇವೆ.