ದುಗುಡ ಕಳೆಯುವ ಜೋಕಮಾರ ಸ್ವಾಮಿ ಆರಾಧನೆ ಹಾಗೂ ವಿಶೇಷ ಪೂಜೆ
Worship and special puja of Jokamara Swami
ಗದಗ 07: ಅವಳಿ ನಗರವಾದ ಗದಗ ಬೆಟಗೇರಿ ನಗರದ ಬೆಟಗೇರಿಯ ತೆಗ್ಗಿನಪೇಟೆಯಲ್ಲಿರುವ ರಾಮಚಂದ್ರ ದೇವೇಂದ್ರ್ಪ ಬಾರಕೇರ ಅವರ ಮನೆಯಲ್ಲಿ ಸಮುದಾಯದ ಮಹಿಳೆಯರು ದುಗುಡ ಕಳೆಯುವ ಜೋಕಮಾರ ಸ್ವಾಮಿ ಆರಾಧನೆ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಜೋಕಮಾರನನ್ನ ಪುಟ್ಟಿಯಲ್ಲಿ ಕೂಡಿಸಿಕೊಂಡು ಜೋಕಮಾರನ ವರ್ಣನೆಯ ಜನಪದ ಗೀತೆಗಳನ್ನು ಲಯಬದ್ಧವಾಗಿ ನುಡಿಯುತ್ತಾ ನಗರದ ವಿವಿಧ ಬಡಾವಣೆಯಲ್ಲಿ ತಿರುಗಾಡುತ್ತಾರೆ. ಜೋಕಮಾರ ಮನೆ ಎದರು ಪ್ರತ್ಯಕ್ಷ ವಾದಾಗ ಅಕ್ಕಿ ಇನ್ನಿತರ ಬಗೆಯ ಕಾಳು ಕಡಿಯನ್ನ ಅರ್ಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಗಂಗಾಮತಸ್ಥರ ಮೂಲ ಸಂಸ್ಕೃತಿಯ ಸಂಪ್ರದಾಯ ಮುಂದುವರಿಸಿಕೊಂಡು ಹೊಗುತ್ತಿರುವ ಸಮುದಾಯದ ಮಹಿಳೆಯರಿಗೆ ಅಭಿನಂದಿಸಿ ಮಾತನಾಡಿದ ಅಂಬಿಗ ಸಮುದಾಯದ ಪ್ರಧಾನ ಕಾರ್ಯದರ್ಶಿಯಾದ ಸಂಗಮೇಶ ಹಾದಿಮನಿ ಯವರು ಜೋಕಮಾರ ನ ಹಾಡಿನ ವರ್ಣನೆಯ ಜನಪದ ಶೈಲಿ ವಿಶಿಷ್ಟವಾಗಿದ್ದು ಎಂದರು
ರಾಮಚಂದ್ರ ಬಾರಕೇರ. ರವಿ ಬಾರಕೇರ ಶೇಖವ್ವ ಬಾರಕೇರ ಚಂದ್ರಕಾಂತ ಬಾರಕೇರ ಸಮುದಾಯದ ಮಹಿಳೆಯರಾದ ಸಕ್ರಮ್ಮ ಜಾಲಗಾರ ಕಮಲಮ್ಮ ಕದಡಿ ರೂಪಾ ಜಾಲಗಾರ ಶಿವಮ್ಮ ಕದಡಿ ಶಾಂತಕ್ಕ ಕದಡಿ ಜೋಕಮಾರನ ಹಾಡನ್ನ ಲಯ ಬದ್ದವಾಗಿ ಹಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 