ವಿದ್ಯಾರ್ಥಿಗಳಿಗೆ ಕೆ-ಸೆಟ್ ಪರೀಕ್ಷೆ ಕುರಿತ ಕಾರ್ಯಾಗಾರ

ವಿದ್ಯಾರ್ಥಿಗಳಿಗೆ ಕೆ-ಸೆಟ್ ಪರೀಕ್ಷೆ ಕುರಿತ ಕಾರ್ಯಾಗಾರ Workshop on K-SET exam for students

ವಿಜಯಪುರ, ಸೆಪ್ಟೆಂಬರ್, 25 : ನಗರದ ನವಬಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಭರವಸೆ ಕೋಶ ವತಿಯಿಂದ ಕೆ-ಸೆಟ್ ಪರೀಕ್ಷೆ ಕುರಿತು ಕಾರ್ಯಾಗಾರವನ್ನು ಸೆ.23ರಂದು ಹಮ್ಮಿಕೊಳ್ಳಲಾಯಿತು.  

ಉದ್ಯೋಗ ಮತ್ತು ಭರವಸೆ ಕೋಶದ ಸಂಚಲಕ ಪ್ರೊ: ಸಿದ್ರಾಮ ಯರನಾಳ ಅವರು ಮಾತನಾಢಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಕೆ-ಸೆಟ್ ಪರೀಕ್ಷೆಯ ಸಮಗ್ರ ಮಾಹಿತಿಯನ್ನು ಕಾರ್ಯಾಗಾರದಲ್ಲಿ ಪಡೆದುಕೊಳ್ಳುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಮಖಂಡಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಡಾ.ರಾಜೇಶ ಜಾಧವ, ಇಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ: ರವಿ ಅರಳಿ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ಡಾ.ರಾಜಶ್ರೀ ಮಾರನೂರ, ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ.ಶಿವಾನಂದ ಜಮಾದಾರ, ಪ್ರೊ: ಚಿದಾನಂದ ಆನೂರ,  ಪ್ರೊ: ರಾಮಪ್ಪ ಕುರಿ, ಪ್ರೊ: ಸುನಿಲ ಹತ್ತಿ, ಸಂಗಮೇಶ ಗುರವ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಅಕ್ಷತಾ ಕೊಪ್ಪದ ನಿರೂಪಿಸಿದರು. ಕುಮಾರಿ ತನುಜಾ ದೊಡಮನಿ ವಂದಿಸಿದರು.