ವಡ್ರಕಲ್ ಗ್ರಾಮದ ಮಹಿಳೆ ಆತ್ಮಹತ್ಯೆ: ತಪ್ಪತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಲು ಒತ್ತಾಯ

ವಡ್ರಕಲ್ ಗ್ರಾಮದ ಮಹಿಳೆ ಆತ್ಮಹತ್ಯೆ: ತಪ್ಪತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಲು ಒತ್ತಾಯ Woman from Vadrakal village commits suicide: Demand for severe punishment for the culprits

ಕೊಪ್ಪಳ 9: ಜಿಲ್ಲೆಯ ಯಲಬುರ್ಗ ತಾಲೂಕಿನ ’ ವಡ್ರಕಲ್ ’ ಗ್ರಾಮದ  ಪಾರ್ವತಿ ಮನೆಗೆ ಜಿಲ್ಲೆಯ ಮುಖಂಡರುಗಳು  ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಇವರು ಭಾಗವಹಿಸಿದ್ದು, ಈ ಘಟನೆ ನಡೆದಿರುವ ಆತ್ಮಹತ್ಯೆ ಮಾಡಿಕೊಂಡಿರುವ ಪಾರ್ವತಿಯ ಪತಿಯವರಾದ ರಮೇಶ್ ಮತ್ತು ಅವರ ತಾಯಿರವರಿಂದ ಸಮಗ್ರ ಮಾಹಿತಿ ಪಡೆದುಕೊಂಡು  ಆರೋಪಿಗಳಿಗೆ ಉಗ್ರವಾದ ಶಿಕ್ಷೆಯನ್ನು ಒದಗಿಸಲು ಒತ್ತಾಯಿಸುವುದು , ಹಾಗೆ ಸಾವಿಗೆ ನಿರ್ಲಕ್ಷ್ಯ ವಹಿಸಿರುವ ಬೇವೂರ್ ಠಾಣೆಯ  ಪೋಲೀಸ್ ಇಲಾಖೆಯ ಅಧಿಕಾರಿಯನ್ನು ಅಮಾನತು ಗೊಳಿಸುವುದು , ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಒದಗಿಸಲು ಒತ್ತಾಯಿಸಲಾಯಿತು.

 ಈ ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ಮುಖಂಡರಾದ ಪರುಶುರಾಮ ಅಮರಾವತಿ ಕುಷ್ಟಗಿ, ರಾಮಣ್ಣ ಅಳವಂಡಿ,  ಯಲ್ಲಪ್ಪ ನಿಲೋಗಲ್ ಮಾನ್ವಿ ಯುವ ಉತ್ಸಾಹಿಗಳಾದ ರಾಮು ಪೂಜಾರಿ ಕೊಪ್ಪಳ, ಯಮನೂರ​‍್ಪ ಕರ್ಮುಡಿ ಯಲಬುರ್ಗಾ ತಾಲೂಕ ಅಧ್ಯಕ್ಷರಾದ ದುರುಗಪ್ಪ ಕರ್ಮುಡಿ, ಯುವ ಉತ್ಸಾಹಿಗಳಾದ ಗಣೇಶ್ ಮುಧೋಳ ಕಾರಟಗಿ ತಾಲೂಕ ಅಧ್ಯಕ್ಷರಾದ ಪಂಪಾಪತಿ ಬಿ ಸೋಮನಾಳ್ , ಯುವ ಜಿಲ್ಲಾ ಅಧ್ಯಕ್ಷರಾದ ಹುಲ್ಲೇಶ್ ಬಂಡಿ ವಡ್ಡರ್ ಗಂಗಾವತಿ ,  ರಮೇಶ್ ಡಗ್ಗಿ , ದುರ್ಗೇಶ್ ಸಿದ್ದಾಪೂರ, ಹೋಬಳಿ ಅಧ್ಯಕ್ಷರಾದ ನಾಗರಾಜ್ ಸಿದ್ದಾಪೂರ, ಹನ್ಮೇಶ್ ಸಿದ್ದಾಪೂರ  , ರಾಘವೇಂದ್ರ ಸಿದ್ದಾಪೂರ, ಬಸವರಾಜ್ ಮುಧೋಳ, ಹನುಮಂತ ಕುಷ್ಟಗಿ, ಗೀರೀಶ್ ಪೂಜಾರಿ, ಯುವ ಉತ್ಸಾಹಿಗಳಾದ ಭೀಮೇಶ ಮಾದಿನೂರ, ಲಕ್ಷ್ಮಣ ತಾವರಗೆರೆ,  ಯಮನೂರ​‍್ಪ ಹಾಲವರ್ತಿ, ಶರಣಪ್ಪ ಭೋವಿ, ಯಮನೂರ​‍್ಪ ವೀರಾಪೂರ ಇನ್ನಿತರರು ಭಾಗವಹಿಸಿದ್ದರು.