ವೀಲಚೇರ ಬಾಸ್ಕೆಟ್ ಬಾಲ್ ಕ್ರೀಡೆ: ರಾಜ್ಯಕ್ಕೆ ಪ್ರಥಮ
Wheelchair Basketball: A first for the state
ಲೋಕದರ್ಶನ ವರದಿ
ವೀಲಚೇರ ಬಾಸ್ಕೆಟ್ ಬಾಲ್ ಕ್ರೀಡೆ: ರಾಜ್ಯಕ್ಕೆ ಪ್ರಥಮ
ತಾಳಿಕೋಟಿ 12: ಅಂತರಾಷ್ಟ್ರೀಯ ಪರ್ಪಲ ಪೆಸ್ಟ್ ಗೋವಾ 2025 ರ ಅಂಗವಾಗಿ ಅಕ್ಟೋಬರ್ 9ರಿಂದ 12ರ ವರೆಗೆ ಪಣಜಿಯ ಡಾನ್ ಬಾಸ್ಕೋ ಶಾಲೆಯ ಬಾಸ್ಕೆಟ್ ಬಾಲ್ ಅಂಕಣದಲ್ಲಿ ಜರುಗಿದ ವೀಲ್ ಚೇರ್ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಕರ್ನಾಟಕ ತಂಡ ಅದ್ಬುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿತು. ಈ ಪಂದ್ಯಾವಳಿಯಲ್ಲಿ ತಮಿಳುನಾಡು, ಪಾಂಡಿಚೇರಿ, ದೆಹಲಿ ಹಾಗೂ ಕರ್ನಾಟಕ ತಂಡ ಭಾಗವಹಿಸಿದ್ದವು. ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ತಂಡ ಪಾಂಡಿಚೇರಿ ಮತ್ತು ತಮಿಳುನಾಡು ತಂಡಗಳನ್ನು ಸೋಲಿಸಿ ಫೈನಲ್ ಗೆ ಪ್ರವೇಶ ಪಡೆದುಕೊಂಡಿತ್ತು. ಫೈನಲ್ (ಅಂತಿಮ)ಪಂದ್ಯದಲ್ಲಿ ದೆಹಲಿ ತಂಡದೊಂದಿಗೆ ತೀವ್ರ ಪೈಪೋಟಿ ಏರ್ಪಟಟು ಸೆಣಸಾಟ ನಡೆಸಿ ಕೊನೆಯಲ್ಲಿ 33:30 ಅಂಕಗಳಿಂದ ದೆಹಲಿ ತಂಡವನ್ನು ಸೋಲಿಸಿ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ತಂಡಕ್ಕೆ ರೂ.44.000/ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ಪರ್ಪಲ ಪೆಸ್ಟ್ ವತಿಯಿಂದ ನೀಡಲಾಯಿತು. ಈ ಸಮಯದಲ್ಲಿ ಕರ್ನಾಟಕ ರಾಜ್ಯ ವೀಲ್ ಚೇರ್ ಬಾಸ್ಕೆಟ್ ಬಾಲ್ ಕಾರ್ಯದರ್ಶಿ ಸಂಜೀವ್ ಹಜೇರಿ, ತಂಡದ ಕ್ರೀಡಾಪಟುಗಳಾದ ಸಿದ್ದಪ್ಪ ಪಟಗುಂದಿ, ಫಕೀರ್ಪ ಕರವಿನಕೊಪ್ಪ, ರವಿ ಚೌಹಾನ್ ಮಾರುತಿ ಕೊಪ್ಪದ, ಸೋಮಶೇಖರ, ಗಂಗರಾಜು ಪ್ರಕಾಶ, ಕೊಟ್ರೇಶ ಹಾಗೂ ಲಕ್ಷ್ಮಣ ಎಂ.ಇದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 