ಉತ್ತಮ ನಾಗರಿಕರಾಗಿ ದೇಶಸೇವೆ ಮಾಡಬೇಕು’ : ಶ್ರೀಧರ್ ನಾಡಿಗೇರ್

ಉತ್ತಮ ನಾಗರಿಕರಾಗಿ ದೇಶಸೇವೆ ಮಾಡಬೇಕು’ : ಶ್ರೀಧರ್ ನಾಡಿಗೇರ್  We should serve the country as good citizens': Sridhar Nadiger

ಉತ್ತಮ ನಾಗರಿಕರಾಗಿ ದೇಶಸೇವೆ ಮಾಡಬೇಕು’ : ಶ್ರೀಧರ್ ನಾಡಿಗೇರ್     

ಧಾರವಾಡ 04; ‘ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ನಿಗದಿತ ಗುರಿ ತಲುಪಬೇಕು. ಉತ್ತಮ ನಾಗರಿಕರಾಗಿ ದೇಶಸೇವೆ ಮಾಡಬೇಕು’ ಎಂದು  ಆರ್‌ಎಸ್‌ಎಸ್ನ ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ಶ್ರೀಧರ್ ನಾಡಿಗೇರ್ ಹೇಳಿದರು. ನಗರದ ಕೆ.ಇ. ಬೋರ್ಡ್‌ ಪದವಿ ಪೂರ್ವ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಒಕ್ಕೂಟ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಸಮಾರೋಪ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.  

     ಪ್ರಾಚಾರ್ಯ ಪ್ರೊ.ಮೋಹನ್ ಸಿದ್ದಾಂತಿ, ‘ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ನಿರಂತರ ಪರಿಶ್ರಮ ಅಗತ್ಯ’ ಎಂದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ಶ್ರೀಧರ್ ಉದಗಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡು ಸಮಾಜಸೇವೆ ಮಾಡಬೇಕು’ ಎಂದರು. ಈ ವೇಳೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ಐಶ್ವರ್ಯ ನಡುವಿನಮನಿ ವಾರ್ಷಿಕ ವರದಿ ಮಂಡಿಸಿದರು. ಉಪನ್ಯಾಸಕರಾದ ಅನುರಾಧ ಹುಯಿಲಗೋಳ, ವಿನೋದಾ ಎಚ್ ಇದ್ದರು.