ಜಲಾಮೃತ ಕಾರ್ಯಕ್ರಮ
ಹಾವೇರಿ: ಬೂದಗಟ್ಟಿ ಗ್ರಾಮಪಂಚಾಯತಿಯ ಸೋಮನಕಟ್ಟಿ ಗ್ರಾಮದ ಮಲ್ಲಮ್ಮನ ಕೆರೆಯ ಸ್ಥಳದಲ್ಲಿ 2019-20ನೇ ಸಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದ್ದು, ಇದೇ ವೇಳೆಯಲ್ಲಿ "ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಕಾರ್ಯಕ್ರಮದ" ಅಂಗವಾಗಿ ಗ್ರಾಮ ಪಂಚಾಯತದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಕೂಲಿಕಾರರು ಎಲ್ಲರೂ ಶ್ರಮದಾನ ಮಾಡುವ ಮೂಲಕ ಕೂಲಿಕಾರರಿಗೆ ಚೈತನ್ಯ ತುಂಬಿ ಕಾಮಗಾರಿ ನಿರ್ವಹಿಸಲು ಕೋರಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಶಾಂತವ್ವ ಹ ಕುರುಬರ, ಉಪಾಧ್ಯಕ್ಷರಾದ ಚನ್ನವ್ವ ಹೊ ಸೋಮಣ್ಣನವರ ಮತ್ತು ಸದಸ್ಯರಾದ ಗೌರವ್ವ ಹ ಉಪ್ಪಾರ, ಮಾಲತೇಶ ಗೋ ಹೊಸಮನಿ, ಫಕ್ಕೀರೇಶ ಕ ಹೊಸಮನಿ, ಶಂಭುಲಿಂಗಪ್ಪ ಬ ಮೇಟಿ, ಸುವರ್ಣವ್ವ ನ ಹಳೇರಿತ್ತಿ, ಯಲ್ಲನಗೌಡ ಕ ಕರೇಗೌಡ್ರ ಮಂಜವ್ವ ಶಿ ತಿಮ್ಮನೇಹಳ್ಳಿ ರತ್ನವ್ವ ಹ ತಳವಾರ ಶ್ರೀಭರಮಗೌಡ ಬ ಮುದಿಗೌಡ್ರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಭಾಗವಹಿಸಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 