ಜಲಾಮೃತ ಕಾರ್ಯಕ್ರಮ
ಹಾವೇರಿ: ಬೂದಗಟ್ಟಿ ಗ್ರಾಮಪಂಚಾಯತಿಯ ಸೋಮನಕಟ್ಟಿ ಗ್ರಾಮದ ಮಲ್ಲಮ್ಮನ ಕೆರೆಯ ಸ್ಥಳದಲ್ಲಿ 2019-20ನೇ ಸಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದ್ದು, ಇದೇ ವೇಳೆಯಲ್ಲಿ "ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಕಾರ್ಯಕ್ರಮದ" ಅಂಗವಾಗಿ ಗ್ರಾಮ ಪಂಚಾಯತದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಕೂಲಿಕಾರರು ಎಲ್ಲರೂ ಶ್ರಮದಾನ ಮಾಡುವ ಮೂಲಕ ಕೂಲಿಕಾರರಿಗೆ ಚೈತನ್ಯ ತುಂಬಿ ಕಾಮಗಾರಿ ನಿರ್ವಹಿಸಲು ಕೋರಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಶಾಂತವ್ವ ಹ ಕುರುಬರ, ಉಪಾಧ್ಯಕ್ಷರಾದ ಚನ್ನವ್ವ ಹೊ ಸೋಮಣ್ಣನವರ ಮತ್ತು ಸದಸ್ಯರಾದ ಗೌರವ್ವ ಹ ಉಪ್ಪಾರ, ಮಾಲತೇಶ ಗೋ ಹೊಸಮನಿ, ಫಕ್ಕೀರೇಶ ಕ ಹೊಸಮನಿ, ಶಂಭುಲಿಂಗಪ್ಪ ಬ ಮೇಟಿ, ಸುವರ್ಣವ್ವ ನ ಹಳೇರಿತ್ತಿ, ಯಲ್ಲನಗೌಡ ಕ ಕರೇಗೌಡ್ರ ಮಂಜವ್ವ ಶಿ ತಿಮ್ಮನೇಹಳ್ಳಿ ರತ್ನವ್ವ ಹ ತಳವಾರ ಶ್ರೀಭರಮಗೌಡ ಬ ಮುದಿಗೌಡ್ರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಭಾಗವಹಿಸಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 