ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ Water supply disruption today

ಲೋಕದರ್ಶನ ವರದಿ 

ಹುಬ್ಬಳ್ಳಿ ಮೇ.22: ದುಮ್ಮವಾಡದಿಂದ ಕಣವಿಹೊನ್ನಾಪೂರ ಮಾರ್ಗ ಮಧ್ಯೆ ಬರುವ 762 ಎಂ.ಎಂ. ವ್ಯಾಸದ ಕಚ್ಚಾ ನೀರಿನ ಕೊಳವೆ ಮಾರ್ಗ ಹಾಗೂ ಅಮ್ಮಿನಭಾವಿಯಿಂದ ರಾಯಾಪೂರ ಮಾರ್ಗ ಮಧ್ಯೆ ಬರುವ ಕವಲಗೇರಿ ಗ್ರಾಮದ ಹತ್ತಿರ ಇರುವ 1219 ಎಂ.ಎಂ. ವ್ಯಾಸದ ಕೊಳವೆ ಮಾರ್ಗದಲ್ಲಿ ಸೋರಿಕೆ ಕಂಡು ಬಂದಿರುವುದರಿಂದ ಮೇ 23ರಂದು ತುರ್ತಾಗಿ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಯೋಜಿಸಲಾಗಿರುವುದರಿಂದ ನವನಗರ ಹಾಗೂ ಹುಬ್ಬಳ್ಳಿ ನಗರದ ಎಲ್ಲ ವಾರ್ಡಗಳಲ್ಲಿ ಕಡಿಮೆ ಒತ್ತಡದ ನೀರು ಸರಬರಾಜು ಆಗುವ ಸಾಧ್ಯತೆಯಿದೆ. ಸಾರ್ವಜನಿಕರು ಸಹಕರಿಸುವಂತೆ ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕದ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.