ನೀರು ಪೂರೈಕೆಯಲ್ಲಿ ವ್ಯತ್ಯಯ
Water supply disruption
ಬೆಳಗಾವಿ, ಜೂನ್ 02: ರಾಣಿ ಚೆನ್ನಮ್ಮ ವೃತ್ತದಲ್ಲಿ 450 ಎಂಎಂ ಪೈಪ್ ವಾಲ್ವನಲ್ಲಿ ಸೋರಿಕೆ ಇರುವುದರಿಂದ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಉತ್ತರ ಭಾಗದ ಕೆಲವು ಭಾಗಗಳಲ್ಲಿ ದಿನಾಂಕ 03-06-2026 ರಂದು ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ. ನೀರು ವ್ಯತ್ಯಯವಾಗುವ ಪ್ರದೇಶಗಳು: ಭಾಗವಾನ ಗಲ್ಲಿ, ಖಡೇ ಬಜಾರ್, ದರ್ಬಾರ ಗಲ್ಲಿ, ಭೋವಿ ಗಲ್ಲಿ, ಪೊಂಗಲ್ ಗಲ್ಲಿ, ಮೋಮಿನ್ ಗಲ್ಲಿ, ಬುರುಡ ಗಲ್ಲಿ, ಗಣಪತಿ ಗಲ್ಲಿ, ರವಿವಾರ ಪೇಠ, ಕಲೈಗಾರ ಗಲ್ಲಿ, ಕಾಮತ್ ಗಲ್ಲಿ, ಕಸಾಯಿ ಗಲ್ಲಿ, ಅನಂತಶಯನ ಗಲ್ಲಿ, ಕುಲಕರ್ಣಿ ಗಲ್ಲಿ, ಕೊನವಾಳ ಗಲ್ಲಿ, ಶೇರೆ ಗಲ್ಲಿ, ಮಠ ಗಲ್ಲಿ, ಮುಜಾವರ ಗಲ್ಲಿ, ಭಾಂದುರ ಗಲ್ಲಿ, ತಾನಾಜಿ ಗಲ್ಲಿ, ತಹಶಿಲ್ದಾರ ಗಲ್ಲಿ, ಪುಲ್ಬಾಗ ಗಲ್ಲಿ, ಮಹಾದ್ವಾರ ರಸ್ತೆಯ 01 ರಿಂದ 05ನೇ ಕ್ರಸ್ ವರೆಗೆ, ಸಂಬಾಜಿ ಗಲ್ಲಿ, ಅಟಾಳೆ ಚಾಳ, ಎಸ್.ಪಿ.ಎಂ ರಸ್ತೆಯ 02ನೇ ಕ್ರಾಸ್, ಗುಡಶೆಡ್ ರಸ್ತೆಯ 04ನೇ ಕ್ರಾಸ್, ವೀರಭದ್ರ ನಗರದ 01 ರಿಂದ 07ನೇ ಕ್ರಾಸ್, ಪಾರುಕಿಯಾ ಕಾಲೋನಿ, ಅಹ್ಮದ್ ನಗರ ಮತ್ತು ಪೋಲಿಸ್ ಹೆಡ್ ಕ್ವಾರ್ಟರ್ಸ. ಆದ ಕಾರಣ ಸಾರ್ವಜನಿಕರು ಮೇಽಽ ಎಲ್ ್ಘ ಟಿ ಯೊಂದಿಗೆ ಸಹಕರಿಸಲು ಕಾರ್ಯಪಾಲಕ ಅಭಿಯಂತರರು, ಯೋ.ಅ.ಘ, ಕುಸ್ಸೆಂಪ್-ಕೆ.ಯು.ಐ.ಡಿ.ಎಫ್.ಸಿ,ಬೆಳಗಾವಿ ಇವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 