ಸಂಬರಗಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಊಟಕ್ಕೆ ನೀರಿನ ಸಮಸ್ಯೆ
Water problem for hot meals for children in Sambaragi schools
ಸಂಬರಗಿ 14 : ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನ ಆಹಾರ ಯೋಜನೆಯನ್ನು ಜಾರಿಗೆ ತಂದು ಪ್ರತಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಆಹಾರ ದೊರೆಯಬೇಕೆಂದು ಆದೇಶ ಹೊರಡಿಸಿದೆ. ಆದರೆ ಕೆಲವು ತೋಟದ ಶಾಲೆಗಳಲ್ಲಿ ಮಕ್ಕಳಿಗೆ ನೀರಿನ ಸಮಸ್ಯೆ ಬರುತ್ತಾ ಇದ್ದು, ಬಿಸಿ ಊಟಕ್ಕೆ ಅಡುಗೆ ಮಾಡಲು ಸಹ ನೀರಿನ ಕೊರತೆ ಇದ್ದು, ಬಿಸಿ ಊಟದ ಸಿಬ್ಬಂದಿಗೆ 1 ಕಿ.ಮೀ ಅಂತರದಿಂದ ನೀರು ತರಬೇಕಾಗಿದ ಸ್ಥಿತಿ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಫೇಬ್ರುವರಿ ತಿಂಗಳು ಮುಕ್ತಾಯಗೊಂಡಿಲ್ಲ. ಆದರೆ ನೀರಿನ ಸಮಸ್ಯೆ ನಿಧಾನಕ್ಕೆ ಹೆಚ್ಚುತ್ತಿದೆ. ಸಂಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗನೂರ ಪಿ.ಎ ತೋಟದ ಶಾಲೆಯಲ್ಲಿ ಕೊಳವೆ ಭಾವಿಯ ನೀರು ಬತ್ತಿಹೋಗಿದ್ದು, ಶಾಲೆಯಲ್ಲಿ ಅಡುಗೆ ಮಾಡಲು ನೀರಿನ ಕೊರತೆ ಉಂಟಾಗಿದೆ. ಶುದ್ಧ ಕುಡಿಯುವ ನೀರಿನಲ್ಲಿ 1 ಕೊಡ ನೀರಿಗೆ 10 ರೂಪಾಯಿಗಳನ್ನು ಕೊಟ್ಟು ಬಿಸಿ ಊಟ ಸಿಬ್ಬಂದಿ ನೀರುತರ ಬೇಕಾಗಿದೆ. ಇನ್ನೂ 2 ತಿಂಗಳು ಶಾಲೆ ನಡೆಯುತ್ತವೆ. ದಿನ ನಿತ್ಯ 10 ರೂ.ಖರ್ಚು ಮಾಡಿ ನೀರು ಸಾಗಾಣಿಕೆ ಮಾಡಬೇಕಾಗುತ್ತದೆ.
ಶಾಲೆಯಲ್ಲಿ ನೀರಿನ ಸಮಸ್ಯೆಯಿಂದ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಸಧ್ಯದಲ್ಲಿ ಶಾಲಾ ದಾಖಲಾತಿಯಲ್ಲಿ ಮಕ್ಕಳ ಸಂಖ್ಯೆ 40 ಅಂತಾಇದ್ದು, ಈ ಸಮಸ್ಯೆಯಿಂದ ಶಾಲೆಯಲ್ಲಿ 20ಕ್ಕಿಂತ ಹೆಚ್ಚಿಗೆ ಮಕ್ಕಳು ಬರುತ್ತಿಲ್ಲ. ಆ ಕಾರಣ ನೀರಿನ ಸಮಸ್ಯೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಅದೇ ಪ್ರಕಾರ ಖೋತವಾಡಿ ಗ್ರಾಮದ ಬನಾಯಿ ತೋಟ ಶಾಲೆ, ಖಿಳೇಗಾವ ಗ್ರಾಮದ ಜಾಧವ ತೋಟ ಶಾಲೆ, ಶಿರೂರ ಗ್ರಾಮದ ಹಜಾರೆತೋಟ ಶಾಲೆ ಸೇರಿದಂತಹ ಹಲವಾರು ತೋಟದ ಶಾಲೆಗಳಲ್ಲಿ ನೀರಿನಕೊರತೆ ಉಂಟಾಗಿದೆ. ನೀರು ಇಲ್ಲದ ಕಾರಣ ಅಡುಗೆ ಮಾಡಲು ಸಹ ತೊಂದರೆಆಗುತ್ತಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 