ಕೃಷಿ ಹೊಲಗಳು ಮತ್ತು ವಸಾಹತುಗಳಲ್ಲಿ ರೈತರಿಗೆನೀರಿನ ಸಮಸ್ಯೆ

ಕೃಷಿ ಹೊಲಗಳು ಮತ್ತು ವಸಾಹತುಗಳಲ್ಲಿ ರೈತರಿಗೆನೀರಿನ ಸಮಸ್ಯೆ Water problem for farmers in agricultural fields and settlements


ಸಂಬರಗಿ 14 : ಗಡಿ ಭಾಗದ ಹಲವು ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಈಗ ಕೃಷಿ ಹೊಲಗಳು ಮತ್ತು ವಸಾಹತುಗಳಲ್ಲಿ ರೈತರಿಗೆ ನೀರಿಗಾಗಿ ಅಲೆದಾಡುತ್ತಿದ್ದಾರೆ. ನೀರಿನ ಸಮಸ್ಯೆ ಆಡಳಿತಕ್ಕೆ ತಲೆನೋವನ್ನುಂಟುಮಾಡಿದೆ ಮತ್ತು ಈಗ ಕೃಷಿ ಹೊಲಗಳಲ್ಲಿ ನೀರಿನ ಟ್ಯಾಂಕರ್‌ಗಳನ್ನು ಪ್ರಾರಂಭಿಸ ಬೆಕೇಂದು ರೈತರು ಅಗ್ರಹಿಸಿದ್ದಾರೆ. ಗಡಿ ಭಾಗದ ಹಲವು ಗ್ರಾಮದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಗಡಿ ಪ್ರದೇಶದ ಪ್ರತಿಯೊಂದು ಹಳ್ಳಿಯಲ್ಲಿ ಜಲ ಜೀವನ್ ಮಷೀನ್‌ 24 ಗಂಟೆಗಳ ನೀರು ಸರಬರಾಜು ಯೋಜನೆಯನ್ನು ಜಾರಿಗೆ ತರಲಾಗಿದೆ, ಆದರೆ ನದಿ ನೀರು ಇಲ್ಲದ ಕಾರಣ, 24 ಗಂಟೆಗಳ ಕಾಲ ನೀರು ಪಡೆಯುವುದಸ್ಥಗೆ ತದುಕೊಂಡಿದ್ದು ಜನರು ನೀರಗಾಗಿ ಹೊಡೆದಾಡುವ ಸ್ಥಿತಿ ಬರತಾ ಇದೆ.     

ನೀರಾವರಿ ಯೋಜನೆ ಅರ್ಧದಷ್ಟು ಉಳಿದಿದ್ದಾವೆ ರೈತರಿಗೆ ಕಷ್ಟಕರವಾಗಿದೆ. ಕೆಲವು ಸ್ಥಳಗಳಲ್ಲಿ, ಕೆಲಸ ಅಪೂರ್ಣವಾಗಿದೆ. ಮಳೆಗಾಲದಲ್ಲಿ, ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತದೆ, ಆದರೆ ಬೇಸಿಗೆಯಲ್ಲಿ, ಕೃಷಿ ಹೊಲಗಳಿಗೆ ನೀರು ಸಿಗುವುದಿಲ್ಲ. ಸಂಬರಗಿ ಶಿರೂರು, ಪಾಂಡೇಗಾಂವ್, ಜಂಬಗಿ , ಜಕಾರಟಿ ಇನ್ನಿತರ ಸೇರಿದ ಗ್ರಾಮದ ರೈತರು ಪರಿಸ್ಥಿತಿ ಗಂಭೀರ ವಾಗಿದೆ ನೀರಿನ ಸಮಸ್ಯೆ ಇದೆ. ಅಧ್ಯಕ್ಷ ಉಪಾಧ್ಯಕ್ಷರು ಸದಸ್ಯರ ಆದಿ ಮುಗಿದ ನಂತರ ಗ್ರಾಮ ಪಂಚಾಯಿತಿ ಮೇಲೆ ಆಡಳಿತಾಧಿಕಾರಿ ಗ್ರಾಮ ಪಂಚಾಯಿತಿಗೆ ಬಂದ ನಂತರ, ಅಧಿಕಾರಿಗಳು ಪ್ರಸ್ತುತ, ನೀರಿನ ಸಮಸ್ಯೆ ಗಂಭೀರವಾಗಿದೆ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅನುದಾನ ಇಲ್ಲದ ಕಾರಣ ಇದರ ಬಗ್ಗೆ ಗಮನ ಹರಿಸಲಾಗಿಲ್ಲ, ಆದ್ದರಿಂದ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.  

ಜಿಲ್ಲಾಡಳಿತವು ಗ್ರಾಮ ಮಟ್ಟದ ಅಧಿಕಾರಿಗಳಿಗೆ ನೀರಿನ ಸಮಸ್ಯೆಯನ್ನು ಪರಿಹರಿಸಲು ಆದೇಶಿಸಿದೆ, ಆದರೆ ಅಧಿಕಾರಿ ಕಣ್ಣ ಮುಚ್ಚಿ ಕೂತಿದ್ದಾರೆ ಆದರೆ ಮೊದಲು ಇಲ್ಲಿ ಇದನ್ನು ಪಾಲಿಸಲಾಗುತ್ತಿರಲಿಲ್ಲ, ಆದ್ದರಿಂದ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ತೋಟಪಟ್ಟಿ ಪ್ರದೇಶದಲ್ಲಿ ಮಹಿಳೆಯರು ನೀರು ತರಲು ದೂರ ಹೋಗಬೇಕಾದ ಘಟನೆ ಇದೆ. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು, ಇಲ್ಲದಿದ್ದರೆ ಜನರು ಬೀದಿಗೆ ಬೀಳುವ ಸಾಧ್ಯತೆಯಿದೆ. ಈ ಬಗ್ಗೆ ನಾವು ಗ್ರಾಮ ಪಂಚಾಯತ್ ಅಧಿಕಾರಿ ದರ್ಯಪ್ಪ ತಗಲಿ ಇವರನ್ನು ಸಂಪರ್ಕಿಸಿದ್ದೇವೆ. ನೀರಿನ ಸಮಸ್ಯೆ ಎಲ್ಲಿದ್ದರೂ, ಅವರು ತಮ್ಮ ಮೇಲಧಿಕಾರಿಗೆ ಎಲ್ಲಾ ಮಾಹಿತಿಯನ್ನು ಮೇಲಾಧಿಕಾರಿ ಗಮನ ತಂದು ನೀರಿನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.