ವೃಕ್ಷಥಾನ್ ಹೆರಿಟೇಜ್ ರನ್: ಜನಮನ ಸೆಳೆಯುತ್ತಿರುವ ಮೆಡಲ್ಗಳು
Vrukshathon Heritage Run: Medals grabbing attention
ವಿಜಯಪುರ, ಡಿ. 18: ಡಿಸೆಂಬರ್ 22 ರಂದು ರವಿವಾರ ನಗರದಲ್ಲಿ ನಡೆಯುತ್ತಿರುವ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳುತ್ತಿರುವ ಓಟಗಾರರಿಗೆ ನೀಡಲಾಗುವ ಮೆಡಲ್ ಗಳು ಮತ್ತು ಐತಿಹಾಸಿಕ ಗೋಳಗುಮ್ಮಟಕ್ಕೆ ಅಳವಡಿಸಲಾಗಿರುವ ಸೋಲಾರ ವಿದ್ಯುತ್ ದೀಪಾಲಂಕಾರ ಈ ಬಾರಿಯ ಓಟದ ಆಕರ್ಷಣೆಯ ಕೇಂದ್ರವಾಗಿವೆ.
ಜನಮನ ಸೆಳೆಯುತ್ತಿರುವ ಮೆಡಲ್ ಗಳು
ಈ ಮಧ್ಯೆ ಹೆರಿಟೇಜ್ ರನ್ ನಲ್ಲಿ ಈಗಾಗಲೇ ಹೆಸರು ನೋಂದಾಯಿಸಿರುವ ಪ್ರತಿಯೊಬ್ಬ ಓಟಗಾರರಿಗೆ ಈ ಬಾರಿಯೂ ಪದಕಗಳನ್ನು ನೀಡಲಾಗುತ್ತಿದ್ದು, ಈ ಪದಕಗಳೂ ಕೂಡ ಈಗ ಆಕರ್ಷಣೀಯವಾಗಿವೆ. ಮೆಡಲ್ ನ ಒಂದು ಬದಿಯಲ್ಲಿ ಪರಿಸರದಲ್ಲಿ ತಮ್ಮನ್ನು ಕಾಣಬೇಕು ಎಂದು ಹೇಳಿರುವ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ಭಾವಚಿತ್ರವಿದೆ. ಮತ್ತೊಂದು ಬದಿಯಲ್ಲಿ ವೃಕ್ಷದ ಚಿತ್ರವಿದೆ. ಈ ಕಾರ್ಯಕ್ರಮದ ಮೂಲಕ ಶ್ರೀಗಳಿಗೆ ಗೌರವ ಸಮರ್ಿಸಲಾಗುತ್ತಿದೆ.
21 ಕಿ. ಮೀ. ಓಟಗಾರರಿಗೆ ಚಿನ್ನದ ಬಣ್ಣದ ಮೆಡಲ್, 10 ಕಿ. ಮೀ. ಓಟಗಾರರಿಗೆ ಕಂಚಿನ ಬಣ್ಣದ ಮೆಡಲ್ ಮತ್ತು 5 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿರುವರಿಗೆ ಕಂದು ಬಣ್ಣದ ಮೆಡಲ್ ನೀಡಲಾಗುತ್ತಿದೆ ಎಂದು ಮೆಡಲ್ ಸಮಿತಿಯ ಡಾ. ಪ್ರವೀಣ ಚೌರ ಮತ್ತು ಸಮೀರ್ ಬಳಿಗಾರ ತಿಳಿಸಿದ್ದಾರೆ.
ವಿಜಯಪುರಕ್ಕೆ ಬರುವ ಓಟಗಾರರಿಗೆ ಗೋಳಗುಮ್ಮಟ ವೀಕ್ಷಣೆಗೆ ಉಚಿತ ವ್ಯವಸ್ಥೆ
ಈ ಮಧ್ಯೆ ಹೆರಿಟೆಜ್ ರನ್ ನಲ್ಲಿ ಪಾಲ್ಗೋಳ್ಳಲು ಆಗಮಿಸುತ್ತಿರುವ ಓಟಗಾರರಿಗೆ ಡಿಸೆಂಬರ್ 21 ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಸಚಿವರಿಂದ ಗೋಳಗುಮ್ಮಟ ವಿದ್ಯುತ್ ದೀಪಾಲಂಕಾರ ಉದ್ಘಾಟನೆ
ಈ ಮಧ್ಯೆ, ಪ್ರವಾಸೋದ್ಯಮ ಇಲಾಖೆ ಸಿ.ಎಸ್.ಆರ್. ಅನುದಾನದಲ್ಲಿ ಐತಿಹಾಸಿಕ ಗೋಳಗುಮ್ಮಟಕ್ಕೆ ಸೋಲಾರ್ ವಿದ್ಯುತ್ ದೀಪಾಲಂಕಾರ ಅಳವಡಿಸಿದೆ. ಸಚಿವ ಎಂ. ಬಿ. ಪಾಟೀಲ ಅವರು ಡಿಸೆಂಬರ್ 21 ರಂದು ಸಂಜೆ 6 ಗಂಟಗೆ ಈ ವಿದ್ಯುತ್ ದೀಪಾಲಂಕಾರವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವಂತೆ ವೃಕ್ಷ ಅಭಿಯಾನ ಪ್ರತಿಷ್ಠಾನ ನೀಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಕೋರಲಾಗಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 