ಸ್ವರ ಸಂಜೆ ನಮನ ಕಾರ್ಯಕ್ರಮ
ಲೋಕದರ್ಶನ ವರದಿ
ಹಾವೇರಿ17: ಈ ನೆಲದ ಕಲೆ ಉಳಿದಿರುವದು ಗ್ರಾಮೀಣ ಜನರಿಂದ ಎಂದು ಜಗದೀಶ ಕಾಳಪ್ಪನವರ ಹೇಳಿದರು.
ಶನಿವಾರ ತಾಲೂಕಿನ ದೇವಗಿರಿಯ ಶಿವಶರಣ ಮಾದಾರ ಚನ್ನಯ್ಯ ಯುವಕ ಮಂಡಳ ವತಿಯಿಂದ ಶನಿವಾರ ಸ್ವರ ಸಂಜೆ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಲದೇ, ಐತಿಹಾಸಿಕ ಪರಂಪರೆ ಹೊಂದಿರುವ ಕಲೆಗಳಿಗೆ ಇಂದಿನ ಜಾಗತೀಕ ದಿನಮಾನಗಳಲ್ಲಿ ಪ್ರೋತ್ಸಾಹ ಕ್ಷೀಣಿಸುತ್ತಿದೆ. ಹಾಗಾಗಿ ಕಲೆ-ಸಂಸ್ಕೃತಿಯನ್ನು ಉಳಿಸು ನಿಟ್ಟಿನಲ್ಲಿ ನಾವೇಲ್ಲರೂ ಭಾಗಿಯಾಗಬೇಕು ಎಂದರು.
ಈ ಸಮಯದಲ್ಲಿ ಕಲಾವಿದರಾದ ಬಿ.ವೈ ಯಲ್ಲಾಪುರ ಹಾಗೂ ಸಂಗಡಿಗರಿಂದ ಜಾನಪದ ಗೀತೆ, ಮತ್ತು ನಿರ್ಮಲಾ ಹಾಗೂ ಸಂಗಡಿಗರಿಂದ ಸೋಭಾನ ಪದ ನೇರವೆರಿತು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯ ಪ್ರಶಸ್ತಿ ವಿಜೇತ ಪ್ರಕಾಶ ದಿಡಗೂರಗೆ ವಿಶೇಷ ಸನ್ಮಾನ ಮಾಡಲಾಯಿತು. ಡಾ. ನಾಗಪ್ಪ ಬಕ್ಕಣ್ಣನವರ, ಜನಾಬ್ ಕಳಸದ, ಮಾಲತೇಶ ಮನ್ನಂಗಿ,ಬೀರಪ್ಪ ಹುಳ್ಳಿ, ಪರುಶುರಾಮ ತಳವಾರ, ಹನುಮಂತಪ್ಪ ಏರಿಮನಿ, ನಿಂಗಪ್ಪ ಪುರದ ಸೇರಿದಂತೆ ಮುಂತಾದವರು ಹಾಜರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 