ಸ್ವರ ಸಂಜೆ ನಮನ ಕಾರ್ಯಕ್ರಮ
ಲೋಕದರ್ಶನ ವರದಿ
ಹಾವೇರಿ17: ಈ ನೆಲದ ಕಲೆ ಉಳಿದಿರುವದು ಗ್ರಾಮೀಣ ಜನರಿಂದ ಎಂದು ಜಗದೀಶ ಕಾಳಪ್ಪನವರ ಹೇಳಿದರು.
ಶನಿವಾರ ತಾಲೂಕಿನ ದೇವಗಿರಿಯ ಶಿವಶರಣ ಮಾದಾರ ಚನ್ನಯ್ಯ ಯುವಕ ಮಂಡಳ ವತಿಯಿಂದ ಶನಿವಾರ ಸ್ವರ ಸಂಜೆ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಲದೇ, ಐತಿಹಾಸಿಕ ಪರಂಪರೆ ಹೊಂದಿರುವ ಕಲೆಗಳಿಗೆ ಇಂದಿನ ಜಾಗತೀಕ ದಿನಮಾನಗಳಲ್ಲಿ ಪ್ರೋತ್ಸಾಹ ಕ್ಷೀಣಿಸುತ್ತಿದೆ. ಹಾಗಾಗಿ ಕಲೆ-ಸಂಸ್ಕೃತಿಯನ್ನು ಉಳಿಸು ನಿಟ್ಟಿನಲ್ಲಿ ನಾವೇಲ್ಲರೂ ಭಾಗಿಯಾಗಬೇಕು ಎಂದರು.
ಈ ಸಮಯದಲ್ಲಿ ಕಲಾವಿದರಾದ ಬಿ.ವೈ ಯಲ್ಲಾಪುರ ಹಾಗೂ ಸಂಗಡಿಗರಿಂದ ಜಾನಪದ ಗೀತೆ, ಮತ್ತು ನಿರ್ಮಲಾ ಹಾಗೂ ಸಂಗಡಿಗರಿಂದ ಸೋಭಾನ ಪದ ನೇರವೆರಿತು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯ ಪ್ರಶಸ್ತಿ ವಿಜೇತ ಪ್ರಕಾಶ ದಿಡಗೂರಗೆ ವಿಶೇಷ ಸನ್ಮಾನ ಮಾಡಲಾಯಿತು. ಡಾ. ನಾಗಪ್ಪ ಬಕ್ಕಣ್ಣನವರ, ಜನಾಬ್ ಕಳಸದ, ಮಾಲತೇಶ ಮನ್ನಂಗಿ,ಬೀರಪ್ಪ ಹುಳ್ಳಿ, ಪರುಶುರಾಮ ತಳವಾರ, ಹನುಮಂತಪ್ಪ ಏರಿಮನಿ, ನಿಂಗಪ್ಪ ಪುರದ ಸೇರಿದಂತೆ ಮುಂತಾದವರು ಹಾಜರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 