ಮಹಿಳೆಯರ ಹೋರಾಟಕ್ಕೆ ಮಣಿದು ತಲ್ಲೂರು ಗ್ರಾಮದ ವಿರೇಶ ವೈನ್ ಶಾಪ್ ಸ್ಥಳಾಂತರ
Viresha Wine Shop in Tallur village shifted after women's struggle
ಯರಗಟ್ಟಿ 05 : ಮಹಿಳೆಯರ ಹೋರಾಟಕ್ಕೆ ಮಣಿದು ತಲ್ಲೂರು ಗ್ರಾಮದ ವಿರೇಶ ವೈನ್ ಶಾಪ್ ಸ್ಥಳಾಂತರಕ್ಕೆ ಮುಂದಾದ ಅಬಕಾರಿ ಇಲಾಖೆ ಸಮೀಪದ ತಲ್ಲೂರ ಗ್ರಾಮದಲ್ಲಿ ನಡೆದ ನಿರಂತರ ಹೋರಾಟದ ಸ್ಥಳಕ್ಕೆ ಅಬಕಾರಿ ಸಿಪಿಐ ಡಿ ಡಿ ಶಿಂಧೋಗಿ ಭೇಟಿ ನೀಡಿ ಪರೀಶೀಲನೆ ನಡೆಸಿ ಮಾಹಿತಿ ಪಡೆದು ಇಲ್ಲಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಂಡು ಬಂದಿದೆ. ಚಟಗಾರರು ಮನೆಯಲ್ಲಿ ಪಾತ್ರೆ ಮತ್ತು ಅಕ್ಕಿ, ಜೋಳ ಮಾರಾಟಮಾಡಿ ಕುಡಿತಕ್ಕೆ ದಾಸರಾಗಿದ್ದು ಹಾಗೂ ಅನೇಕರು ಸಾವು ಅಪ್ಪಿರು ಘಟನೆಗಳು ನಡೆದಿವೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡರು. ವೀರೆಶ ವೈನ್ಸ ಮಾಲಕರಿಗೆ ಹಾಗೂ ಸಿಬ್ಬಂದಿಗೆ ಅಬಕಾರಿ ಸಿಪಿಐ ಡಿಡಿ ಶಿಂಧೋಗಿ 15 ದಿನಗಳಲ್ಲಿ ನಿಮ್ಮ ವೈನ್ ಶಾಪ್ ಬೇರೆಡೆ ಸ್ಥಾಳಾತಂರ ಮಾಡಲು ಸೂಚಿಸಿದರು.
ಈ ವೇಳೆಗ್ರಾಮದ ಹಿರಿಯರಾದ ವಿಕ್ರಮ ದೇಸಾಯಿ ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ಯುವಜನತೆ ಹಾಳಾಗಲು ಹಲವರ ಸಾವಿಗೆ ಕಾರಣವಾದ ವೀರೆಶ ವೈನ್ಸ ಶಾಪ ಸ್ಥಾಳಾಂತ ಮಾಡಲು ಮುಂದಾದ ಇಲಾಖೆ ಅಭಿನಂದನೆ ಸಲ್ಲಿಸಿ ಶೀಘ್ರ ಸ್ಥಳಾಂತರಿಸುವಂತೆ ಮನವಿ ಮಾಡಿದರು. ಈ ವೇಳೆ ಅಬಕಾರಿ ಪಿಎಸ್ಐಗಳಾದ ಮಹಾದೇವ ಕಟಗೇನ್ನವರ, ಎಸ್.ಎಸ್. ಕಾರಜೋಳ, ಪಿಎಸ್ಐ ಡೆಬ್ಲೂ. ಎಚ್. ಯಾದವಾಡ, ಪೊಲೀಸ್ ಸಿಬ್ಬಂದಿ ಎಸ್. ಎಸ್. ಹುಂಬಿ, ಬಿ.ಡಿ. ಕುದರಿ, ಸಂಜೀವಿನಿ ವಕ್ಕೂಟದ ಸದಸ್ಯರು ಹುಸೇನಬಿ ಕುದರಿ, ಲಕ್ಷ್ಮಿ ಪಾಟೀಲ, ಯಶೋದಾ ಕಾಶಪ್ಪನವರ, ಪವಿತ್ರಾ ಈಟಿ, ಕಸ್ತೂರಿ ಹೊಸೂರ, ರೇಣುಕಾ ದೊಡವಾಡ, ಮಾಬುಬಿ ಭಾಗವನ ಸುನಂದಾ ಉಪ್ಪಾರ, ಶಿವಪ್ಪ ಕಡಬಿ, ವಿಠ್ಠಲ ಮಾದರ, ಬಸವರಾಜ ಮುದ್ದಣ್ಣವರ, ಮಂಜುನಾಥ್ ಬಂದಕನವರ, ಮಾರುತಿ ವನ್ನೂರ್, ಪರಮೇಶ್ ಮಾದರ, ಪಕ್ಕೀರ್ಪ ಭಜಂತ್ರಿ, ರತ್ನವ್ವ ಮಾದರ, ರಮಜವ್ವ ಬೆಟಗೇರಿ, ಶಾಂತವ್ವ ಉಪ್ಪಾರ, ಗೌರವ್ವ ಉಪ್ಪಾರ, ದ್ರವಪದಿ ಪಾಟೀಲ, ನಾಗತೇವ್ವಾ ಮಣ್ಣಿಕೇರಿ ಮತ್ತಿತರಿದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 