ದಾಂಡೇಲಿ ಘಟಕಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ
Unopposed election of office bearers for Dandeli unit
ಲೋಕದರ್ಶನ ವರದಿ
ದಾಂಡೇಲಿ 14 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ಘಟಕಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಸ್.ಜಿ. ಬಿರಾದಾರ ಘೋಷಿಸಿದ್ದಾರೆ. ಮೇ 24 ರಂದು ದಾಂಡೇಲಿ ತಾಲೂಕಾ ಘಟಕಕ್ಕೆ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕಿತ್ತು ಈ ಕುರಿತಂತೆ ಚುನವಣಾ ಪ್ರಕ್ರಿಯೆ ಆರಂಭಗೊಂಡಿತ್ತು. ಚುನಾವಣಾ ಕಣದಿಂದ ಅಂತಿಮವಾಗಿ ಹಲವು ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡ ಹಿನ್ನಲೆಯಲ್ಲಿ ಕಾರ್ಯಕಾರಿ ಸಮಿತಿಗೆ ಬೇಕಾಗುವಷ್ಟೆ ಸದಸ್ಯರು ಅಂತಿಮವಾಗಿ ಉಳಿದ ಕಾರಣ ಅವರನ್ನು ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ಅಧ್ಯಕ್ಷರಾಗಿ ಸಿದ್ದಪ್ಪ ಕುರುಗುಂದ ಮತ್ತು ಸದಸ್ಯರುಗಳಾಗಿ ಗಂಗಯ್ಯಾ ರುದ್ರಯ್ಯಾ ಹಿರೇಮಠ, ಶಂಕ್ರಯ್ಯಾ ಹಿರೇಮಠ ರುದ್ರಾ್ಪ ತೋಟಗೇರ ಪ್ರಶಾಂತ ಪಾಟೀಲ್ ಶರಣಬಸಪ್ಪಾ ರಾಜೂರ್, ನಿಂಗರಾಜ್ ಮೊದಗಿ, ದುಂಡಪ್ಪಾ ಬೆಣೆ,್ಣ ಆಶ್ವಿನಕುಮಾರ ಜಟ್ಟಿ, ಶಿವನಗೌಡಾ ಗಂಗಗನ ಗೌಡರ್ ಶಂಕರಯ್ಯಾ ಜಡೇಹಿರೇಮಠ, ಚೆನ್ನಬಸಪ್ಪಾ ಮುರಗೋಡ, ಬಸನಗೌಡಾ ಪಾಟೀಲ್, ದ್ರಾಕ್ಷಾಯಣಿ ಅಂಕಲಗಿ, ಗೀತಾ ಜಟ್ಟಿ, ಮೈತ್ರಾ ಜಿಗಳಿ, ದೀಪಾ ಪಾಟೀಲ್, ಜ್ಯೋತಿ ಸೌದತ್ತಿ ಮಠ, ಸವಿತಾ ಮುಂಗರವಾಡಿ, ಸುಜಾತಾ ಗಡದ ಅವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 