ಕಾನಿಪ ತಿಕೋಟಾ-ಬಬಲೇಶ್ವರ ತಾಲೂಕು ಘಟಕ ಪದಾಧಿಕಾರಿಗಳ ಅವಿರೋಧ ಆಯ್ಕೆ

ಕಾನಿಪ ತಿಕೋಟಾ-ಬಬಲೇಶ್ವರ ತಾಲೂಕು ಘಟಕ ಪದಾಧಿಕಾರಿಗಳ ಅವಿರೋಧ ಆಯ್ಕೆ Unopposed election of Kanip Tikota-Babaleshwar taluk unit office bearers

ಕಾನಿಪ ತಿಕೋಟಾ-ಬಬಲೇಶ್ವರ ತಾಲೂಕು ಘಟಕ ಪದಾಧಿಕಾರಿಗಳ ಅವಿರೋಧ ಆಯ್ಕೆ  

ವಿಜಯಪುರ 11 ತಿಕೋಟಾ ಮತ್ತು ಬಬಲೇಶ್ವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-28 ಅವಧಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ಶನಿವಾರ ಮುಸ್ಸಂಜೆ ನಡೆದ ಚುನಾವಣೆಯಲ್ಲಿ ಸಾತಲಿಂಗಯ್ಯ ಶಂ. ಸಾಲಿಮಠ(ಅಧ್ಯಕ್ಷ), ಲಕ್ಷ್ಮಿ ಚಂ. ಹಿರೇಮಠ(ಉಪಾಧ್ಯಕ್ಷೆ), ಶ್ರೀಕಾಂತ ಹಡಲಗೇರಿ(ಪ್ರಧಾನ ಕಾರ್ಯದರ್ಶಿ), ನಿಂಗಪ್ಪ ಮಲ್ಲಪ್ಪ ಸಂಗಾಪುರ(ಖಜಾಂಚಿ)ಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ಚುನಾವಣಾಧಿಕಾರಿಯಾಗಿ ಮಹೇಶ ವಿ. ಶಟಗಾರ, ಶರಣಬಸಪ್ಪ ಮಸಳಿ ಹಾಗೂ ಶಶಿಕಾಂತ ಮೆಂಡೆಗಾರ ಕಾರ್ಯ ನಿರ್ವಹಿಸಿದರು.  ಅಲ್ಲದೇ, ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಘೋಷಣೆ ಪತ್ರ ವಿತರಿಸಿ ಶುಭ ಕೋರಿದರು.