ಅಕ್ರಮ ಮರಳು ದಂಧೆಗೆ ನಲುಗಿದ ತುಂಗಭದ್ರಾ ನದಿ ಒಡಲು
Tungabhadra river, devastated by illegal sand mining, bursts into flames
ಅಕ್ರಮ ಮರಳು ದಂಧೆಗೆ ನಲುಗಿದ ತುಂಗಭದ್ರಾ ನದಿ ಒಡಲು
ಲೋಕದರ್ಶನ ವರದಿ
ಹೂವಿನಹಡಗಲಿ 27: ತಾಲೂಕಿನಜೀವಾಳವಾಗಿರುವ ತುಂಗಭದ್ರಾ ಬಲ ದಂಡೆಯ ನದಿ ತೀರದಲ್ಲಿಕಬ್ಬಿಣದ ತೆಪ್ಪಗಳ ಮೂಲಕ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ. ಮರಳು ನೀತಿ ಜಾರಿಗೊಳಿಸುವಲ್ಲಿ ತೋರಿರುವ ನಿರ್ಲಕ್ಷ್ಯದ ಫಲವಾಗಿ ಸರಕಾರಕ್ಕೆ ಲಕ್ಷಾಂತರ ರೂ. ಮೌಲ್ಯದ ರಾಜಧನ ನಷ್ಟವಾಗುತ್ತಿದೆ. ಅಲ್ಲದೇ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ಪರಿಸರ, ಅಂತರ್ಜಲದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಮನೆ ಮಾಡಿದೆ. ತಾಲೂಕಿನ ಬಲ ದಂಡೆಯ ತುಂಗಭದ್ರಾ ನದಿ ತೀರದ ಬನ್ನಿಮಟ್ಟಿ, ನಂದಿಗಾವಿ, ಮೈಲಾರ,ಕುರುವತ್ತಿ, ಲಿಂಗನಾಯ್ಕನಹಳ್ಳಿ ಹಾಗೂ ಹಾವೇರಿ ಜಿಲ್ಲೆಯ ಎಡ ದಂಡೆಯ ನದಿ ತೀರದ ಹಾವನೂರು,ಗಳಗನಾಥ ,ಮೇವುಂಡಿ ಭಾಗದಲ್ಲಿ ಬಿಹಾರದ ಕಾರ್ಮಿಕರು ಕಬ್ಬಿಣದ ತೆಪ್ಪಗಳ ಮೂಲಕ ಹಾವೇರಿ ಜಿಲ್ಲೆ ಗೆ ನಿರಂತರ ಅಕ್ರಮ ಮರಳು ಸಾಗಣೆ ನಡೆಯುತ್ತದೆ. ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರಂತರವಾಗಿ ಹಲವು ಕಡೆಗಳಲ್ಲಿ ಅಕ್ರಮ ಮರಳು ದಂಧೆಕೋರರು ವಿರುದ್ಧ ದಾಳಿ ಮಾಡಿ ಕೇಸ್ ದಾಖಲು ಮಾಡಿದ್ದಾರೆ. ಈಗಾಗಲೇ ವಿಜಯನಗರ ಜಿಲ್ಲೆಯ ಹೂವಿನಹಡಗಲಿ -6, ಹರಪನಹಳ್ಳಿ-2 ಮರಳಿನ ಬ್ಲಾಕ್ಗಳು ಟೆಂಡರಾ ಪ್ರಕ್ರಿಯೆಯಲ್ಲಿವೆ. ಕೆಲ ಕಾರಣಗಳಿಂದ ಬ್ಲಾಕ್ ಟೆಂಡರ್ ವಿಳಂಬ ನೀತಿಯಿಂದ ಮರಳು ದಂಧೆಕೋರರಿಗೆ ಲೂಟಿ ಮಾಡಲು ಅನುಕೂಲವಾಗಿದೆ. ಸರ್ಕಾರಕ್ಕೆ ಲಕ್ಷಾಂತದ ರೂ. ನಷ್ಟವಾಗುತ್ತಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 