ಮಿಲ್ಲತ್ ಶಾಲೆಯಲ್ಲಿ ವಾತ್ಸಲ್ಯ ಚಾರಿಟೇಬಲ್ ಟ್ರಸ್ಟ್‌ ವ್ಯವಸ್ಥಾಪಕರಿಗೆ ಸನ್ಮಾನ

Tribute to Vatsalya Charitable Trust Manager at Millat School

ಮಿಲ್ಲತ್ ಶಾಲೆಯಲ್ಲಿ ವಾತ್ಸಲ್ಯ ಚಾರಿಟೇಬಲ್ ಟ್ರಸ್ಟ್‌ ವ್ಯವಸ್ಥಾಪಕರಿಗೆ ಸನ್ಮಾನ

ಕೊಪ್ಪಳ 15 :  ಬಡ ಮಕ್ಕಳ ಪಾಲಿಗೆ ಸಂಜೀವಿನಿಯಾಗಿ ಶ್ರಮಿಸುತ್ತಿರುವ ಮತ್ತು ಪ್ರತಿ ವರ್ಷ ನಿರಂತರವಾಗಿ ಬಡ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಶಾಲೆಗಳ ಶುಲ್ಕ ಪಾವತಿಸಿ ಪ್ರೋತ್ಸಾಹಿಸುತ್ತಿರುವ ಬೆಂಗಳೂರಿನ ವಾತ್ಸಲ್ಯ ಚಾರಿಟೇಬಲ್ ಟ್ರಸ್ಟ್‌ ವ್ಯವಸ್ಥಾಪಕ ಸಂಯೋಜಕರಿಗೆ ಶನಿವಾರ ಕೊಪ್ಪಳ ನಗರದ ಮಿಲ್ಲತ್ ಪಬ್ಲಿಕ್ ಶಾಲೆಯ ಲ್ಲಿ ಸನ್ಮಾನಿಸಿ ಸತ್ಕರಿಸಿ ಅಭಿನಂದಿಸಲಾಯಿತು,ಬೆಂಗಳೂರಿನ ವಾತ್ಸಲ್ಯ ಚಾರಿಟೇಬಲ್ ಟ್ರಸ್ಟ್‌ ನ ಯೋಜನಾ ವ್ಯವಸ್ಥಾಪಕರಾದ ವೆಸ್ಲಿ ಮತ್ತು ವಿಸಿಟಿ ಸೂಫಿಯಾ ಹಾಗೂ ಮುಕ್ತ ಫೌಂಡೇಶನ್ ನ ಸುಮಲತಾ ರವರಿಗೆ  ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು ಸೇರಿ ವಿದ್ಯಾರ್ಥಿಗಳು ಹಾಗೂ ಪಾಲಕರ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು, ಈ ಸಂದರ್ಭದಲ್ಲಿ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳಾದ ಎಂ ಸಾಧಿಕ್ ಅಲಿ, ಎಂ ಡಿ ಜಹೀರ್ ಅಲಿ ,ಎಂ ಡಿ ಆಸಿಫ್ ಕರ್ಕಿಹಳ್ಳಿ ಮತ್ತು ಕಾರ್ಯನಿರ್ವಾಹಕ ಸಂಚಾಲಕರಾದ ಅಬ್ದುಲ್ ಅಜೀಜ್ ಮಾನ್ವಿ ಕರ್ ಹಾಗೂ ಸೈಯದ್ ಇಮಾಮ್ ಹುಸೇನ್ ಸಿಂದೋಗಿ ಸೇರಿದಂತೆ ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರೆವಡಿ ಸಹ ಶಿಕ್ಷಕರು ಪಾಲ್ಗೊಂಡಿದ್ದರು.