ರಾಜು ಕಾಗೆಗೆ ಸನ್ಮಾನ

ರಾಜು ಕಾಗೆಗೆ ಸನ್ಮಾನ Tribute to Raju Kage

ಸಂಬರಗಿ 13: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜು ಕಾಗೆ ಅವರನ್ನು ಮದಭಾವಿಯ ಖಂಡೇರಾವ್ ಘೋರೆ​‍್ಡ ಸರ್ಕಾರ್ ಸನ್ಮಾನಿಸಿದರು.  ಮದಭಾವಿಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೃಷ್ಣಾಜಿ ಶಿಂಧೆ ಅವರನ್ನು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಆನಂದ ಭಂಡಾರೆ, ಎಂ ಕೆ ಮಗ್ದುಮ್ ಪೋಪಟ್ ನಿಕಮ್ ಗೋಪಾಲ್ ನಿವಾಲ್ಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಸಕ ರಾಜೀವ್ ಕಾಗೆ ಅವರು ಶೀಘ್ರದಲ್ಲೇ ನನಗೆ ಮೂರನೇ ಜವಾಬ್ದಾರಿ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು. ಸರ್ಕಾರ ಎರಡು ಕೊಡುಗೆಗಳನ್ನು ನೀಡಿದೆ ಮತ್ತು ಮೂರನೇ ಕೊಡುಗೆಯನ್ನು ಪಕ್ಷದ ಹಿರಿಯರಿಂದ ಶೀಘ್ರದಲ್ಲೇ ಸ್ವೀಕರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.