ಇಂದು ಹಿರೇಮಣ್ಣೂರಿನಲ್ಲಿ ಚೆನ್ನಕೇಶವ ಜಯಂತಿ: ಸಹಸ್ರ ಶಂಖಾಭಿಷೇಕ
Today is Chennakesava Jayanti in Hiremannur: Sahasra Shankhabhiseka
ವಿಜಯಪುರ 03: ಹಿರೇಮಣ್ಣೂರಿನಲ್ಲಿ ಡಿ. 4ರಂದು ಚೆನ್ನಕೇಶವ ಜಯಂತಿ, ಸಹಸ್ರ ಶಂಖಾಭೀಷೇಕ ಹಾಗೂ 5ರಂದು ರಘುನಾಥತೀರ್ಥ ಮಹಾಸ್ವಾಮಿಗಳ ಆರಾಧನೆ ಜರುಗಲಿದೆ ಎಂದು ಚೆನ್ನಕೇಶವ ದೇವಸ್ಥಾನ ಟ್ರಸ್ಟ ಅಧ್ಯಕ್ಷ ವಾದಿರಾಜ ಎಸ್ ಜಹಾಗೀರದಾರ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಜಹಾಗೀರದಾರ ಅವರುಗಳು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4ರಂದು ಬೆಳಿಗ್ಗೆ ಸುಪ್ರಭಾತ, ಪಂಚಾಮೃತಾಭೀಷೇಕ, ಸಹಸ್ರ ಶಂಖಾಭೀಷೇಕ, ರಂಗಪೂಜೆ, ರಥೋತ್ಸವ, ಲಕ್ಷ ಪುಷ್ಪಾರ್ಚನೆ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನಡೆಯಲಿದೆ. ಸಾಯಂಕಾಲ ದಾಸವಾಣಿ ನಡೆಯಲಿದೆ.
5ರಂದು ಆದ್ಯರಿಗೆ ಆದ್ಯತ್ವವನ್ನು ಅನುಗ್ರಹಿಸಿದ ರಘುನಾಥ ತೀರ್ಥರ ಆರಾಧನೆಯು ಜರುಗಲಿದೆ. ಸುಪ್ರಭಾತ, ರಘುನಾಥ ತೀರ್ಥ, ಆದ್ಯ ವರದರಾಜಾಚಾರ್ಯ, ಕೃಷ್ಣದ್ವೈಪಾಯನಾಚಾರ್ಯ ಹಾಗೂ ರಾಮಕೇಶವಾಚಾರ್ಯ ಪಾದುಕೆಗಳ ಶೋಭಾಯಾತ್ರೆ ನದಿಯಿಂದ ದೇವಾಲಯ ಪರ್ಯಂತ ನಡೆಯಲಿದೆ, ಪಂಡಿತರಿಂದ ಪ್ರವಚನ ರಥೋತ್ಸವ, ಭಜನೆ ನಡೆಯಲಿದೆ. ಗುಡಿಯ ಹಿಂಭಾಗ ಸಮುದಾಯ ಭವನ ನಿರ್ಮಾಣವಾಗುತ್ತಿದೆ.
ಈ ಎರಡು ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚೆನ್ನಕೇಶವ ದೇವರ ಕೃಪೆಗೆ ಪಾತ್ರರಾಗಬೇಕೆಂದು ಚೆನ್ನಕೇಶವ ದೇವಸ್ಥಾನ ಟ್ರಸ್ಟ ಅಧ್ಯಕ್ಷ ವಾದಿರಾಜ ಎಸ್ ಜಹಾಗೀರದಾರ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಜಹಾಗೀರದಾರ ಅವರುಗಳು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 