ಇಂದು ಹಿರೇಮಣ್ಣೂರಿನಲ್ಲಿ ಚೆನ್ನಕೇಶವ ಜಯಂತಿ: ಸಹಸ್ರ ಶಂಖಾಭಿಷೇಕ
Today is Chennakesava Jayanti in Hiremannur: Sahasra Shankhabhiseka
ವಿಜಯಪುರ 03: ಹಿರೇಮಣ್ಣೂರಿನಲ್ಲಿ ಡಿ. 4ರಂದು ಚೆನ್ನಕೇಶವ ಜಯಂತಿ, ಸಹಸ್ರ ಶಂಖಾಭೀಷೇಕ ಹಾಗೂ 5ರಂದು ರಘುನಾಥತೀರ್ಥ ಮಹಾಸ್ವಾಮಿಗಳ ಆರಾಧನೆ ಜರುಗಲಿದೆ ಎಂದು ಚೆನ್ನಕೇಶವ ದೇವಸ್ಥಾನ ಟ್ರಸ್ಟ ಅಧ್ಯಕ್ಷ ವಾದಿರಾಜ ಎಸ್ ಜಹಾಗೀರದಾರ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಜಹಾಗೀರದಾರ ಅವರುಗಳು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4ರಂದು ಬೆಳಿಗ್ಗೆ ಸುಪ್ರಭಾತ, ಪಂಚಾಮೃತಾಭೀಷೇಕ, ಸಹಸ್ರ ಶಂಖಾಭೀಷೇಕ, ರಂಗಪೂಜೆ, ರಥೋತ್ಸವ, ಲಕ್ಷ ಪುಷ್ಪಾರ್ಚನೆ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನಡೆಯಲಿದೆ. ಸಾಯಂಕಾಲ ದಾಸವಾಣಿ ನಡೆಯಲಿದೆ.
5ರಂದು ಆದ್ಯರಿಗೆ ಆದ್ಯತ್ವವನ್ನು ಅನುಗ್ರಹಿಸಿದ ರಘುನಾಥ ತೀರ್ಥರ ಆರಾಧನೆಯು ಜರುಗಲಿದೆ. ಸುಪ್ರಭಾತ, ರಘುನಾಥ ತೀರ್ಥ, ಆದ್ಯ ವರದರಾಜಾಚಾರ್ಯ, ಕೃಷ್ಣದ್ವೈಪಾಯನಾಚಾರ್ಯ ಹಾಗೂ ರಾಮಕೇಶವಾಚಾರ್ಯ ಪಾದುಕೆಗಳ ಶೋಭಾಯಾತ್ರೆ ನದಿಯಿಂದ ದೇವಾಲಯ ಪರ್ಯಂತ ನಡೆಯಲಿದೆ, ಪಂಡಿತರಿಂದ ಪ್ರವಚನ ರಥೋತ್ಸವ, ಭಜನೆ ನಡೆಯಲಿದೆ. ಗುಡಿಯ ಹಿಂಭಾಗ ಸಮುದಾಯ ಭವನ ನಿರ್ಮಾಣವಾಗುತ್ತಿದೆ.
ಈ ಎರಡು ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚೆನ್ನಕೇಶವ ದೇವರ ಕೃಪೆಗೆ ಪಾತ್ರರಾಗಬೇಕೆಂದು ಚೆನ್ನಕೇಶವ ದೇವಸ್ಥಾನ ಟ್ರಸ್ಟ ಅಧ್ಯಕ್ಷ ವಾದಿರಾಜ ಎಸ್ ಜಹಾಗೀರದಾರ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಜಹಾಗೀರದಾರ ಅವರುಗಳು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 