ಇಂದು ಹಿರೇಮಣ್ಣೂರಿನಲ್ಲಿ ಚೆನ್ನಕೇಶವ ಜಯಂತಿ: ಸಹಸ್ರ ಶಂಖಾಭಿಷೇಕ
Today is Chennakesava Jayanti in Hiremannur: Sahasra Shankhabhiseka
ವಿಜಯಪುರ 03: ಹಿರೇಮಣ್ಣೂರಿನಲ್ಲಿ ಡಿ. 4ರಂದು ಚೆನ್ನಕೇಶವ ಜಯಂತಿ, ಸಹಸ್ರ ಶಂಖಾಭೀಷೇಕ ಹಾಗೂ 5ರಂದು ರಘುನಾಥತೀರ್ಥ ಮಹಾಸ್ವಾಮಿಗಳ ಆರಾಧನೆ ಜರುಗಲಿದೆ ಎಂದು ಚೆನ್ನಕೇಶವ ದೇವಸ್ಥಾನ ಟ್ರಸ್ಟ ಅಧ್ಯಕ್ಷ ವಾದಿರಾಜ ಎಸ್ ಜಹಾಗೀರದಾರ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಜಹಾಗೀರದಾರ ಅವರುಗಳು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4ರಂದು ಬೆಳಿಗ್ಗೆ ಸುಪ್ರಭಾತ, ಪಂಚಾಮೃತಾಭೀಷೇಕ, ಸಹಸ್ರ ಶಂಖಾಭೀಷೇಕ, ರಂಗಪೂಜೆ, ರಥೋತ್ಸವ, ಲಕ್ಷ ಪುಷ್ಪಾರ್ಚನೆ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನಡೆಯಲಿದೆ. ಸಾಯಂಕಾಲ ದಾಸವಾಣಿ ನಡೆಯಲಿದೆ.
5ರಂದು ಆದ್ಯರಿಗೆ ಆದ್ಯತ್ವವನ್ನು ಅನುಗ್ರಹಿಸಿದ ರಘುನಾಥ ತೀರ್ಥರ ಆರಾಧನೆಯು ಜರುಗಲಿದೆ. ಸುಪ್ರಭಾತ, ರಘುನಾಥ ತೀರ್ಥ, ಆದ್ಯ ವರದರಾಜಾಚಾರ್ಯ, ಕೃಷ್ಣದ್ವೈಪಾಯನಾಚಾರ್ಯ ಹಾಗೂ ರಾಮಕೇಶವಾಚಾರ್ಯ ಪಾದುಕೆಗಳ ಶೋಭಾಯಾತ್ರೆ ನದಿಯಿಂದ ದೇವಾಲಯ ಪರ್ಯಂತ ನಡೆಯಲಿದೆ, ಪಂಡಿತರಿಂದ ಪ್ರವಚನ ರಥೋತ್ಸವ, ಭಜನೆ ನಡೆಯಲಿದೆ. ಗುಡಿಯ ಹಿಂಭಾಗ ಸಮುದಾಯ ಭವನ ನಿರ್ಮಾಣವಾಗುತ್ತಿದೆ.
ಈ ಎರಡು ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚೆನ್ನಕೇಶವ ದೇವರ ಕೃಪೆಗೆ ಪಾತ್ರರಾಗಬೇಕೆಂದು ಚೆನ್ನಕೇಶವ ದೇವಸ್ಥಾನ ಟ್ರಸ್ಟ ಅಧ್ಯಕ್ಷ ವಾದಿರಾಜ ಎಸ್ ಜಹಾಗೀರದಾರ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಜಹಾಗೀರದಾರ ಅವರುಗಳು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 