ದೀಪ ಬೆಳಗಿಸಿ ಪ್ರಧಾನಿ ಕರೆಗೆ ಬೆಂಬಲಿಸಿದ ಜನತೆ
ಬಳ್ಳಾರಿ:- 9ನಿಮಿಷಗಳ ಕಾಲ 9ದೀಪ ಬೆಳಗಿಸಿ ಕರೊನಾ ವಿರುದ್ಧ ಕೈ ಜೋಡಿಸಿ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸಂದೇಶಕ್ಕೆ ಗಣಿ ಜಿಲ್ಲೆಯ ಜನತೆ ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ವೈಭವ ಮೆರೆದರು.
ಬಳ್ಳಾರಿ ನಗರ, ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಸಿರುಗುಪ್ಪ, ಕಂಪ್ಲಿ, ಸಂಡೂರು, ಕುರುಗೋಡು ಸೇರಿದಂತೆ ಪ್ರತಿ ತಾಲೂಕು, ಹಳ್ಳಿ, ಪಟ್ಟಣಗಳ ಮನೆ, ಮನೆಯ ಹೊರಗಡೆ, ಬಾಲ್ಕನಿಗಳಲ್ಲಿ ಗೃಹಿಣಿಯರು, ಯುವತಿಯರು, ಮಹಿಳೆಯರು 9ನಿಮಿಷಗಳ ಕಾಲ ದೀಪ ಬೆಳಗಿಸಿ ಸಂಭ್ರಮಿಸಿದರು.
ಮನೆಯಲ್ಲಿರುವ ವಿದ್ಯುತ್ ಆಫ್ ಮಾಡಿ ದೀಪ ಬೆಳಗಿಸಿದ್ದರಿಂದ ಸಂಕ್ರಮಣ ಕಾಲದ ಅಯ್ಯಪ್ಪ ಸ್ವಾಮಿಯ ಜ್ಯೋತಿಯ ದರ್ಶನದಂತೆ ದೀಪಗಳು ಎಲ್ಲೆಡೆ ಕಂಗೊಳಿಸಿದವು.
ಕೆಲವರು ಮೊಬೈಲ್ ಟಾಚರ್್ ಆನ್ ಮಾಡುವ ಮೂಲಕ ದೀಪದ ಕಾರ್ಯಕ್ಕೆ ಕೈ ಜೋಡಿಸಿದರು.
ಏಕಾಏಕಿ ವಿದ್ಯುತ್ ಬಂದ್ ಮಾಡಿ ನಿಗಧಿತ ಸಮಯ 9ಗಂಟೆಗೆ ದೀಪ ಬೆಳಗಿಸುವ ಮೂಲಕ ಜನತೆ ಧನ್ಯತಾ ಭಾವ ಮೆರೆದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 