ದೀಪ ಬೆಳಗಿಸಿ ಪ್ರಧಾನಿ ಕರೆಗೆ ಬೆಂಬಲಿಸಿದ ಜನತೆ
ಬಳ್ಳಾರಿ:- 9ನಿಮಿಷಗಳ ಕಾಲ 9ದೀಪ ಬೆಳಗಿಸಿ ಕರೊನಾ ವಿರುದ್ಧ ಕೈ ಜೋಡಿಸಿ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸಂದೇಶಕ್ಕೆ ಗಣಿ ಜಿಲ್ಲೆಯ ಜನತೆ ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ವೈಭವ ಮೆರೆದರು.
ಬಳ್ಳಾರಿ ನಗರ, ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಸಿರುಗುಪ್ಪ, ಕಂಪ್ಲಿ, ಸಂಡೂರು, ಕುರುಗೋಡು ಸೇರಿದಂತೆ ಪ್ರತಿ ತಾಲೂಕು, ಹಳ್ಳಿ, ಪಟ್ಟಣಗಳ ಮನೆ, ಮನೆಯ ಹೊರಗಡೆ, ಬಾಲ್ಕನಿಗಳಲ್ಲಿ ಗೃಹಿಣಿಯರು, ಯುವತಿಯರು, ಮಹಿಳೆಯರು 9ನಿಮಿಷಗಳ ಕಾಲ ದೀಪ ಬೆಳಗಿಸಿ ಸಂಭ್ರಮಿಸಿದರು.
ಮನೆಯಲ್ಲಿರುವ ವಿದ್ಯುತ್ ಆಫ್ ಮಾಡಿ ದೀಪ ಬೆಳಗಿಸಿದ್ದರಿಂದ ಸಂಕ್ರಮಣ ಕಾಲದ ಅಯ್ಯಪ್ಪ ಸ್ವಾಮಿಯ ಜ್ಯೋತಿಯ ದರ್ಶನದಂತೆ ದೀಪಗಳು ಎಲ್ಲೆಡೆ ಕಂಗೊಳಿಸಿದವು.
ಕೆಲವರು ಮೊಬೈಲ್ ಟಾಚರ್್ ಆನ್ ಮಾಡುವ ಮೂಲಕ ದೀಪದ ಕಾರ್ಯಕ್ಕೆ ಕೈ ಜೋಡಿಸಿದರು.
ಏಕಾಏಕಿ ವಿದ್ಯುತ್ ಬಂದ್ ಮಾಡಿ ನಿಗಧಿತ ಸಮಯ 9ಗಂಟೆಗೆ ದೀಪ ಬೆಳಗಿಸುವ ಮೂಲಕ ಜನತೆ ಧನ್ಯತಾ ಭಾವ ಮೆರೆದರು.
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ 