ಟಿಪ್ಪರ್ ಚಾಲಕನಿಗೆ ಅವಾಚ್ಯ ಶಬ್ಧ ಬಳಸಿ, ಬೆದರಿಕೆ : ದೂರು ದಾಖಲು
Tipper driver threatened by using abusive language: Complaint filed
ಕಾರವಾರ 15: ಜಲ್ಲಿ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಅಡ್ಡಗಟ್ಟಿ, ಚಾಲಕನಿಗೆ ಬೆದರಿಕೆ ಹಾಕಿದ ಈರ್ವರ ಮೇಲೆ ಮಲ್ಲಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆಂದು ಯಲ್ಲಾಪುರದ ಟಿಪ್ಪರ್ ಚಾಲಕ ತನಜೀರ್ ಆದಂ ಶೇಖ್ ಪೊಲೀಸರಿಗೆ ದೂರು ನೀಡಿದ್ದಾರೆ. ತನಜೀರ್ ಆದಂ ಶೇಖ್, ಹುಬ್ಬಳ್ಳಿಯ ತಡಸದಿಂದ ಜಲ್ಲಿಕಲ್ಲು ತುಂಬಿಕೊಂಡು ಕೈಗಾ ಅಣುಸ್ಥಾವರ 5- 6 ಕಾಮಗಾರಿ ಸ್ಥಳಕ್ಕೆ ತೆರಳುವಾಗ ದಾರಿ ಮಧ್ಯೆ ಕೆರವಡಿ ಗ್ರಾಮದ ಹತ್ತಿರ, ರಸ್ತೆಯ ಮೇಲೆ ಟಿಪ್ಪರಗೆ ಇಬ್ಬರು ಅಡ್ಡ ಹಾಕಿದರು. ಕೆರವಡಿ ಗ್ರಾಮದ ರವಿ ದೇವಿದಾಸ ನಾಯ್ಕ ಹಾಗೂ ಕಿರಣ ದೇವಿದಾಸ ನಾಯ್ಕ ಎಂಬಿಬ್ಬರು ಅಡ್ಡಗಟ್ಟಿ ಬೋ.... ಮಗನೇ, ಕೈಗಾಕ್ಕೆ ಯಾಕೆ ಬರುತ್ತಿ ಇದು ನಿಮ್ಮಪ್ಪನ ರೋಡಾ, ಕೆಳಗೆ ಬಾ ನೀನಗೆ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಧಮ್ಮಿಗೆ ಬೆದರಿದ ಟಿಪ್ಪರ್ ಚಾಲಕ ವಾಹನದ ಕಿಟಕಿಯ ಗ್ಲಾಸ್ ಹಾಕಿಕೊಂಡಾಗ, ಆರೋಪಿಗಳು ಕಲ್ಲಿನಿಂದ ಟಿಪ್ಪರ್ನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಚಾಲಕನ ಬಲಗೈಗೆ ಗಾಯಗೊಳಿಸಿ, ಮತ್ತೆ ಇದೆ ದಾರಿಯಲ್ಲಿ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಈ ಘಟನೆಯಿಂದ ಗಾಸಿಗೊಂಡ ಚಾಲಕ, ನೇರ ಮಲ್ಲಾಪುರ ಪೋಲಿಸ ಠಾಣೆಗೆ ಟಿಪ್ಪರ್ ಚಲಾಯಿಸಿ ತಂದು, ಪೊಲೀಸರಿಗೆ ಘಟನೆ ವಿವರಿಸಿ, ದೂರು ನೀಡಿದ್ದಾರೆ. ಮುಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 