ಸವದತ್ತಿ ಪೋಲೀಸರಿಂದ ಕಳ್ಳನ ಬಂಧನ
Thief arrested by Savadatti police
ಸವದತ್ತಿ 25: ಪೊಲೀಸ್ ಠಾಣೆ ವ್ಯಾಪ್ತಿಯ ನವೆಂಬರ್ 21 ರಂದು ಸುಜಾತಾ ರಾಜೇಂದ್ರ ಸೋನಾರ, ಜಮಖಂಡಿ ತಾಲ್ಲೂಕಿನ ವರ್ತಕ ಗಲ್ಲಿ ಇವರು ಕುಟುಂಬ ಸಮೇತ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಯಲ್ಲಮ್ಮನಗುಡ್ಡಕ್ಕೆ ಬಂದು ದರ್ಶನವನ್ನು ಮಾಡಿಕೊಂಡು ಹೋಗುವಾಗ ಅವರು ಕಾರಿನಲ್ಲಿ ಕುಳಿತುಕೊಂಡಿದ್ದಾಗ ಯಾರೋ ಒಬ್ಬ ಆರೋಪಿತನು ತನ್ನ ಸ್ಕೂಟಿ ಮೋಟಾರ ಸೈಕಲನಲ್ಲಿ ಬಂದು ದೂರುದಾರಳ ಕಾರಿನ ಕಿಟಕಿಯ ಒಳಗೆ ಕೈ ಹಾಕಿ ದೂರದಾರಳ, ಕೊರಳಲ್ಲಿದ್ದ ಎರಡು ಬಂಗಾರದ ಮಂಗಳಸೂತ್ರಗಳನ್ನು ಕೈಯಿಂದ ಕಿತ್ತುಕೊಂಡು ಕಳ್ಳತನ ಮಾಡಿದ್ದು ಆರೋಪದ ಮೇಲೆ ಒಬ್ಬ ಪ್ರತ್ಯೇಕ ಆರೋಪಿಯನ್ನು ಸವದತ್ತಿ ಪೊಲೀಸರು ಮಂಗಳವಾರ 24 ರಂದು ಬಂದಿಸಿದ್ದಾರೆ.
ತಾಲ್ಲೂಕಿನ ನಿಪ್ಪಾಣಿ ಸಾ.ಬೆಡಕಿಹಾಳ ಮೂಲದ ಆರೋಪಿತನಾದ ವಿನೋದ ಅಶೋಕ ಯಾದವ, ಎಂದು ಗುರುತಿಸಿಲಾಗಿದ್ದು ಆರೋಪಿಯಿಂದ ಯಥಾವತ್ತಾಗಿ ಜಪ್ತ ಮಾಡಿ ಮೋಟಾರ್ ಸೈಕಲ್ ಹಾಗೂ 34 ಗ್ರಾಂ ಬಂಗಾರದ ಮಾಂಗಲ್ಯ ಸರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ ಅವರ ಮಾರ್ಗದರ್ಶನದಲ್ಲಿ ಪಿಐ ಸುರೇಶ್ ಬೆಂಡೆಗುಂಬಳ ನೇತೃತ್ವದಲ್ಲಿ ಹಾಗೂ ಅಪರಾಧ ವಿಭಾಗದ ಪಿಎಸ್ಐ ಲಕ್ಷ್ಮಣ ಗೌಡಿ, ಪೊಲೀಸ್ ಸಿಬ್ಬಂದಿ ಎಎಸ್ಐ ಬಿ.ಆರ್. ಸಣ್ಣಮಾಳಗಿ, ಯಲ್ಲಪ್ಪ ಅಜ್ಜನ್ನವರ, ಸುಭಾಸ ಬೆಟಗೇರಿ, ಉದ್ದಪ್ಪ ಪೂಜೇರ, ಅಮರ ಸಾರಾಪೂರ, ಶಹಜಾನ ತೊರಗಲ್, ಬಸವರಾಜ ತಂಗೋಜಿ, ಶಿವಾನಂದ ಕೊರಕೊಪ್ಪ ಸೇರಿ ಯಶಸ್ವಿ ಕಾರ್ಯಾಚರಣೆ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 