ಮಹಿಳಾ ವಿವಿಯಲ್ಲಿ “ಕರ​‍್ೂರ ಗಿರಿಯ ಉರಿಯ ಕೊಂಬತೆ” ಕೃತಿ ಬಿಡುಗಡೆ

ಮಹಿಳಾ ವಿವಿಯಲ್ಲಿ “ಕರ​‍್ೂರ ಗಿರಿಯ ಉರಿಯ ಕೊಂಬತೆ” ಕೃತಿ ಬಿಡುಗಡೆ The work “Karkur Giriya Uriya Kombate” was released at the Women’s University

ವಿಜಯಪುರ 25: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಡಾ.ಸುಧಾರಾಣಿ ಮಣೂರ ರಚಿಸಿರುವ "ಕರ​‍್ೂರ ಗಿರಿಯ ಉರಿಯ ಕೊಂಬಂತೆ"ೆ ಕೃತಿ ಬಿಡುಗಡೆ ಮಾಡಿದರು. 

ಕೃತಿ ಬಿಡುಗಡೆ ಸಂದರ್ಭದಲ್ಲಿ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಮಾತನಾಡಿ, ಈ ಕೃತಿಯು 12ನೇ ಶತಮಾನದ ವಚನ ಚಳುವಳಿಯ ಆಶಯಗಳನ್ನು ಒಳಗೊಂಡಿದ್ದು, ಸಮಾನತೆ, ಸ್ವಾತಂತ್ರ್ಯ ಹಾಗೂ ನೈತಿಕ ಮೌಲ್ಯಗಳ ಸಂದೇಶವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದೆ ಎಂದರು. 

ಕಾರ್ಯಕ್ರಮದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್‌. ಲಕ್ಕಣ್ಣವರ, ಕನ್ನಡ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಮಹೇಶ ಚಿಂತಾಮಣಿ ಹಾಗೂ ಪ್ರೊ. ನಾರಾಯಣ ಬಿ. ಪವಾರ ಉಪಸ್ಥಿತರಿದ್ದರು.