ಭೋಗೇಶ್ವರ ಗುಡಿಗೆ ತಲುಪಿದ ಭೀಮಾನದಿಯ ನೀರು

ಭೋಗೇಶ್ವರ ಗುಡಿಗೆ ತಲುಪಿದ ಭೀಮಾನದಿಯ ನೀರು  The water of the Bhima River reached the Bhogeshwar temple

ಆಲಮೇಲ 24: ತಾಲೂಕಿನ ಕಡಣಿ ಗ್ರಾಮ ದೇವರಾದ ಭೋಗಲಿಂಗೇಶ್ವರ ದೇವಸ್ಥಾನದ ಸುತ್ತಲೂ ಭೀಮಾ ನದಿ ನೀರು ಆವರಿಸಿಕೊಂಡಿದೆ. ಭೀಮಾನದಿಗೆ ಮಹಾರಾಷ್ಟ್ರದಿಂದ ಉಜನಿ ಜಲಾಶದಿಂದ 2. 20 ಲಕ್ಷ ಕ್ಯೂಸೆಟ್ ನೀರು ಭೀಮ ನದಿಗೆ ಹರಿಬಿಟ್ಟಿದ್ದು ಸಾರ್ವಜನಿಕರ ನದಿ ಅಕ್ಕ-ಪಕ್ಕ ಸಂಚರಿಸಬಾರದು. ಹಾಗೂ ನದಿಯ ದಡದಲ್ಲಿದ್ದ ಹೊಲಗಳಿಗೆ  ರಾತ್ರಿ ವೇಳೆ  ಹೋಗಬಾರದು , ಭೀಮಾ ನದಿಯ ನೀರಿನಿಂದ ಅನೇಕ ಬೆಳೆಯ.ಹತ್ತಿ.ಕಬ್ಬು ಸಂಪೂರ್ಣವಾಗಿ ನಾಶವಾಗಿವೆ.   

ಇಲ್ಲಿನ ರೈತರು ಹಾನಿ ಆದ ಬೆಳಗಳಿಗೆ ಸೂಕ್ತವಾದ ಸರಕಾರದಿಂದ ಪರಿಹಾರ ನೀಡಬೇಕು ಎಂದು ರೈತರ  ಆಗ್ರವಾಗಿದೆ ಎಂದು ರಾಜು ವಡ್ಡರ್ ಹೇಳಿದರು.   

ಭೀಮಾ ನದಿಗೆ ಉಜನಿಯ ಜಲಾಶಯದಿಂದ ರಾತ್ರಿ ವೇಳೆ 2.20 ಲಕ್ಷ ಕ್ಯೋಸೆಟ್ ನೀರು ಬಿಡಲಾಗಿದೆ. ಶನಿವಾರ ಸಂಜೆಯಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ ಭೀಮಾ ನದಿಗೆ ಕಡಣಿ ತಾವರಖೇಡ. ತಾರಾಪುರ ಹೊಂದಿಕೊಂಡಿರುವುದರಿಂದ ಯಾವುದೇ ಅಪಾಯವಾಗಿಲ್ಲ.  

ಸಂತೋಷ ಕ್ಷತ್ರಿ  

ಆಲಮೇಲ ವಲಯದ ಕರವೇ ಅಧ್ಯಕ್ಷ ಹಾಗೂ  ಗ್ರಾಮ ಪಂಚಾಯತಿ ಸದಸ್ಯರು ಕಡಣಿ