ಮಲ್ಲಿಗೆ ನೆಲದ ಬಂಡಾಯದ ಧ್ವನಿ ಶೇಷಗಿರಿರಾವ್ ಏನಿದು ಬದುಕು ಇದೆಂಥಾ ತಿರುವು ಕೃತಿ ಬಿಡುಗಡೆ
The voice of the rebellion of the jasmine land, Sheshagiri Rao, releases the book What is life? This
ಲೋಕದರ್ಶನ ವರದಿ
ಹೂವಿನ ಹಡಗಲಿ 14: ಮಲ್ಲಿಗೆ ನೆಲದ ಬಂಡಾಯದ ಧ್ವನಿ ಶೇಷಗಿರಿರಾವ್ ಎಂದು ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರಸಮಭಾವ ಪ್ರಕಾಶನದ ವತಿಯಿಂದ ವಿಶ್ವ ಕಿಡ್ನಿ ದಿನದ ಅಂಗವಾಗಿ ಎಚ್ ಶೇಷಗಿರಿರಾವ್ ಅವರ "ಏನಿದು ಬದುಕು ಇದೆಂಥಾ ತಿರುವು" ಕಿಡ್ನಿ ಕಸಿ ಕಥಾನಕ (ಪರಿಷ್ಕೃತ ಆವೃತ್ತಿ) ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.ಕಾಮ್ರೇಡ್ ಎಸ್ ಎಸ್ ಹಿರೇಮಠರ ಒಡನಾಡಿಯಾಗಿ ನರಗುಂದ ಬಂಡಾಯ,ರೈತ ಕಾರ್ಮಿಕರ ಜನಪರ ಚಳವಳಿಗಳು ಸೇರಿದಂತೆ ವಿವಿಧ ಹೋರಾಟಗಾಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದನ್ನು ಸ್ಮರಿಸಿದರು. ಗ್ರಂಥ ಕೊಡುವ ಸುಖ ಅನನ್ಯ.ವ್ಯಾಟ್ಸಪ್ ಫೇಸ್ಬುಕ್ ಜಾಲತಾಣಗಳ ಭರಾಟೆ ನಡುವೆ ಓದು ಸಂಸ್ಕೃತಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಡಾ ಸಂದೀಪ್ ಕೃತಿ ಪರಿಚಯ ಮಾಡಿ ಇದೊಂದು ಕನ್ನಡದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮಹತ್ವದ ಕೃತಿ.ಅನುಭವ ಕಥನ, ಬದುಕಿನ ಅರಿವಿನ ಪಯಣ, ತ್ಯಾಗದ ಗುಣ, ತಾಯ್ತನ, ಜೀವಪರ ನಿಲುವು, ಸಾಮಾಜಿಕ ಪ್ರಜ್ಞೆ ಚಿಂತನೆ ಹೊಣೆಗಾರಿಕೆ ಕೃತಿಯಿಂದ ವ್ಯಕ್ತವಾಗಿದೆ ಎಂದರು.ಲೇಖಕ ಹುರಕಡ್ಲಿ ಶಿವಕುಮಾರ , ಸಾಹಿತಿ ಬಿ.ಪೀರಭಾಷಾ ಮತ್ತು ಹಿರಿಯ ರೈತ ಸಂಘದ ಹೋರಾಟಗಾರ ಜಿ. ಎಂ ವೀರಸಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಕಾಶಕಿ ಕಲಾವತಿ ಹವಾಲ್ದಾರ್ ಇದ್ದರು.ಗಣೇಶ್ ಹವಾಲ್ದಾರ್, ರಂಗನಾಥ ಹವಾಲ್ದಾರ್, ಎಲ್ ಖಾದರ್ ಬಾಷಾ ಸಮತಾ,ಮಮತಾ ಹವಾಲ್ದಾರ್ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 