ಸಿದ್ಧಾರೂಢರ ಶ್ರೀಗಳ ಮನಸ್ಸು ಗೆದ್ದ ಖಾಸ್ಗತ: ಶ್ರೀ ಶಿವಲಿಂಗ ಮಹಾಸ್ವಾಮಿಗಳು
The special feature that won the hearts of Siddharth Sris: Sri Shivalinga Mahaswamy
ಸಿದ್ಧಾರೂಢರ ಶ್ರೀಗಳ ಮನಸ್ಸು ಗೆದ್ದ ಖಾಸ್ಗತ: ಶ್ರೀ ಶಿವಲಿಂಗ ಮಹಾಸ್ವಾಮಿಗಳು
ತಾಳಿಕೋಟೆ 13: ಪವಾಡ ಪುರುಷ ಖಾಸ್ಗತ ಶಿವಯೋಗಿಗಳು ಸಿದ್ಧಾರೂಢರ ಶಿಷ್ಯರಲ್ಲಿ ಅವರ ನೆಚ್ಚಿನ ಶಿಷ್ಯರಾಗಿದ್ದರು,ಅವರ ಸಾಮಾಜಿಕ , ಧಾರ್ಮಿಕ ಕಾರ್ಯಗಳಿಂದ, ಪವಾಡಗಳಿಂದಾಗಿ ಇಂದಿಗೂ ಜನರಿಗೆ ಪೂಜ್ಯರಾಗಿದ್ದಾರೆ ಎಂದು ಶಿರಸಿ ಚಿಕ್ಕತೊಟ್ಲಕೆರೆಯ ಬಣ್ಣದ ಮಠದ ಪೂಜ್ಯ ಶ್ರೀ.ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ವೀರ ಶೈವ ವಿದ್ಯಾವರ್ಧಕ ಸಂಘ ವಿರಕ್ತಶ್ರೀ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಖಾಸ್ಗತ ಶಿವಯೋಗಿಗಳ 129 ನೆಯ ಹಾಗೂ ಶ್ರೀ ವಿರಕ್ತ ಶ್ರೀ ಗಳ 11ನೇ ಪುಣ್ಯಸ್ಮರಣೋತ್ಸವದಸಾನ್ನಿದ್ಯ ವಹಿಸ ಆಶೀರ್ವದಿಸಿ ಈ ಮಾತು ಹೇಳಿದರು. ವೇದಿಕೆಯಲ್ಲಿ ಸಾನಿದ್ಯ ನೀಡಿ ಮಾತನಾಡಿದ ದೇವರ ಹಿಪ್ಪರಗಿ ಜಡೇಶ್ವರ ಮಠದ ಪೂಜ್ಯ ಜಡೇಶ್ವರ ಶಿವಾಚಾರ್ಯರು ಮತ್ತು ದೇವರಗೋಪುರದ ಸಂಸ್ಥಾನ ಮಠದ ಶ್ರೀ ಗಜದಂಡ ಶಿವಾಚಾರ್ಯರು ಶ್ರೀ ಖಾಸ್ಗತಶಿವಯೋಗಿಗಳ ಜೀವನದಲ್ಲಿ ನಡೆದ ಪ್ರಮುಖ ಪವಾಡಗಳನ್ನು ಸ್ಮರಿಸಿದರು. ಅಂಬಳನೂರ ಗ್ರಾಮದ ಪ್ರವಚನಕಾರರಾದ ಶ್ರೀ ಸಂಗಮನಾಥ ದೇವರು ವಿರಕ್ತಶ್ರೀಗಳ ಕೆಲವು ಪವಾಡಗಳನ್ನು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ವ್ಹಿ.ಸಿ.ಹಿರೇಮಠ, ಸಹಕಾರ್ಯದರ್ಶಿ ಕೆಎಸ್.ಮುರಾಳ, ಶ್ರೀಮಠದ ಆಡಳಿತ ಉಸ್ತುವಾರಿ ಮುರಗೇಶ ವಿರಕ್ತ ಮಠ ಇದ್ದರು. ಡಾ.ಎ.ಎಸ್.ಆಲಾಳಮಠ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ವೀ.ವಿ.ಸಂಘದ ಅಂಗ ಸಂಸ್ಥೆಗಳ ಚೇರಮನ್ ರು, ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಖಾಸ್ಗತ ಸಂಗೀತ ಶಾಲಯ ಶಿಕ್ಷಕರು ಪ್ರಾರ್ಥನೆ ಹಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 