ಅಭಿವೃದ್ಧಿ ಕಾಣದ ಆನಂದಪೂರ ಗ್ರಾಮದ ರಸ್ತೆಗಳು
The roads of Anandapur village are underdeveloped
ಯಮಕನಮರಡಿ, 03 ಃ ಸಮೀಪದ ಹತ್ತರಗಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಆನಂದಪೂರ ಬಡಾವಣೆಯಲ್ಲಿ ಕೊಳಚೆ ನೀರಿನಿಂದ ತುಂಬಿ ತುಳುಕುವ ರಸ್ತೆಗಳು, ಕೊಳಚೆ ನೀರು ರಸ್ತೆಗಳ ಮೇಲೆ ಹರಿದು ಬಂದರೂ ಸಹಿತ ಇತ್ತ ಕಡೆಗೆ ಜನ ಪ್ರತಿನಿಧಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯತ ಪ್ರತಿ ಸದಸ್ಯರಿಗೆ ಸುಮಾರು 3 ಲಕ್ಷ ರೂಪಾಯಿಗಳ ಅಭಿವೃದ್ಧಿಗಾಗಿ ಅನುದಾನ ಹಂಚಲಾಗಿದೆ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಆನಂದ ಹೊಳೆನ್ನವರ ಪತ್ರಕರ್ತರಿಗೆ ಮಾಹಿತಿ ನೀಡಿದರು. ಆದರೆ ಸದರಿ ಹಣವು ಯಾವ ಅಭಿವೃದ್ಧಿ ವಿನಿಯೋಗವಾಗಿದೆ ಎಂಬುದು ತಿಳಿಯದಂತಾಗಿದೆ.
ಎಲ್ಲಿ ನೋಡಿದಲ್ಲಿ ರಸ್ತೆಗಳ ಮಧ್ಯೆ ಗುಂಡಿಗಳು ಆ ಗುಂಡಿಗಳಲ್ಲಿ ಕೊಳಚೆ ನೀರು ಅಲ್ಲದೇ ಗ್ರಾಮದ ಕೆಲವೊಂದು ವಾರ್ಡಗಳಲ್ಲಿ ಸರಿಯಾದ ಚರಂಡಿಗಳೇ ಇಲ್ಲ, ಹೀಗಾಗಿ ಸದರಿ ಗ್ರಾಮವು ಆನಂದಪೂರ ಎಂಬುವ ತನ್ನ ಅಸ್ತಿತ್ವವನ್ನು ಕಳೆದುಕೊಂಡಂತಾಗಿದೆ. ಅಲ್ಲದೇ ಸಮರ್ಕವಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಕೂಡ ಇರುವುದಿಲ್ಲ. ಅಲ್ಲದೇ ನೀರಿನ ಓವರ್ ಟ್ಯಾಂಕುಗಳಲ್ಲಿ ಗಲೀಜು ತುಂಬಿದ್ದು ಇರುತ್ತದೆ. ಸದರಿ ಆನಂದಪೂರ ಗ್ರಾಮದ ಕುಡಿಯುವ ನೀರಿನ ಜಲಜೀವನ ಮಿಶನ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಓವರ್ ಟ್ಯಾಂಕ್ಗಳಲ್ಲಿ ನೀರಿಲ್ಲದೇ ಖಾಲಿಯಾಗಿರುತ್ತವೆ.
ಸದರಿ ಆನಂದಪೂರ ಗ್ರಾಮಕ್ಕೆ ಕ್ಷೇತ್ರದ ಸಚಿವರಾದ ಶ್ರೀ ಸತೀಶ ಜಾರಕಿಹೊಳಿಯವರು ಸುಮಾರು ಮೂರು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು ಇರುತ್ತದೆ. ಆದರೆ ಇಲ್ಲಿ ಸಮರ್ಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಕೇವಲ ಹೆಸರಿಗಾಗಿ ಆನಂದಪೂರ ಎಂದು ಕರೆಯುತ್ತಾರೆ. ನಿಜವಾದ ಆನಂದಪೂರವನ್ನು ದೀಪದ ಬೆಳಕಿನಲ್ಲಿ ಕಾಣುವಂತಾಗಿದೆ. ಅಲ್ಲಿಯ ಜನಪ್ರತಿನಿಧಿಗಳನ್ನು ಅಭಿವೃದ್ಧಿ ಬಗ್ಗೆ ವಿಚಾರಿಸಿದಾಗ ಸಮರ್ಕವಾದ ಉತ್ತರ ಸಿಗುತ್ತಿಲ್ಲ. ಈ ಕುರಿತು ಅಲ್ಲಿಯ ಕೆಲ ಜನರು ಸಮಾಜಸೇವಕರು, ಗ್ರಾಮ ಪಂಚಾಯತಿಗೆ ವಿಚಾರಣೆಗಾಗಿ ಹೋದರೆ ಕೆಲ ಮುಖಂಡರು ಮಾಹಿತಿ ಕೇಳುವವರ ಬಾಯಿಯನ್ನು ಮುಚ್ಚುತ್ತಾರೆ.
ಗ್ರಾಮದಲ್ಲಿ ಸುಮಾರು 5 ರಿಂದ 6 ವರ್ಷಗಳ ಕಾಲ ಆಸ್ತಿ ದಾಖಲಾತಿಗಳಿಗಾಗಿ ಇ ಸ್ವತ್ತು ಮಾಡಲು ಅರ್ಜಿಗಳನ್ನು ಸಲ್ಲಿಸಿದ್ದು ಇಲ್ಲಿಯವರೆಗೆ ಸದರಿ ಅರ್ಜಿದಾರರಿಗೆ ಯಾವುದೇ ತರಹದ ದಾಖಲೆಗಳನ್ನು ಒದಗಿಸಿರುವುದಿಲ್ಲ. ಕಾರಣ ಜನರು ಅಲೆದಾಡಿ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ಈ ಕುರಿತು ಗ್ರಾಮಸ್ಥರು ಬೆಳಗಾವಿ ಜಿಲ್ಲಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಪತ್ರಕರ್ತರಿಗೆ ತಿಳಿಸಿದರು.
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ 