ಲೋಕದರ್ಶನ ವರದಿ
ಹಾವೇರಿ 02: ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಗ್ರಾಹಕನೆ ಗ್ರಾಹಕನಲ್ಲದ ಯಾವುದೇ ವ್ಯಕ್ತಿಯು ಸಿಗಲಾರ, ಹುಟ್ಟಿದ ಮಗುವಿನಿಂದ ಹಿಡಿದು ಸಾಯುವ ವ್ಯಕ್ತಿಯವರೆಗೆ ಎಲ್ಲರೂ ಗ್ರಾಹಕರೆ, ಗ್ರಾಹಕ ಜಾಗೃತಿಯೆ ದೇಶದ ಪ್ರಗತಿ ಬುದ್ದಿವಂತ ಗ್ರಾಹಕನೆ ದೇಶದ ಆಸ್ತಿ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಸ್.ಎಚ್.ಮಜೀದ ಹೇಳಿದರು.
ಅವರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾವೇರಿ, ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಧೆ ಹಾವೇರಿ. ಇವರ ಸಂಯುಕ್ತಾಶ್ರಯದಲ್ಲಿ ಭಗತ್ ಪದವಿ ಪೂರ್ವ ಕಾಲೇಜ್ ಹಾವೇರಿಯಲ್ಲಿ ಏರ್ಪಡಿಸಿದ "ಗ್ರಾಹಕರ ಹಕ್ಕು ಮತ್ತು ಕಾಯ್ದೆ ಕುರಿತು ಕಾರ್ಯಗಾರ" ಕಾಯರ್ಾಗಾರ ಉದ್ಘಾಟಸಿ ಮಾತನಾಡಿದರು.
ಅವರು ಗ್ರಾಹಕ ಹಕ್ಕು ಕಾಯ್ದೆ 1986 ರಲ್ಲಿ ಜಾರಿಗೆ ಬಂದರೂ ಅದರ ಬಗ್ಗೆ ಜನರಿಗೆ ಅರಿವಿಲ್ಲ, ಗ್ರಾಹಕ ಹಕ್ಕು ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಹಾಗೂ ವ್ಯಾಪಕ ಪ್ರಚಾರ ಮಾಡುವುದು ಅವಶ್ಯಕವಾಗಿದೆ. ಇಂದು ಗ್ರಾಹಕರು ಜಾಗೃತರಾಗುವದರ ಮೂಲಕ ತಾವು ಖರೀದಿಸಿದ ವಸ್ತುಗಳಿಗೆ ರಶೀದಿ ಪಡೆದಾಗ ಮಾತ್ರ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ, ಈ ಹಿಂದೆ ಕಾನುನೂಗಳು ಜಾರಿಯಲ್ಲಿದ್ದರು ಸಹಿತ "ಗ್ರಾಹಕರೇ ಎಚ್ಚರ" ಎಂದು ಸಾರುತ್ತಿದ್ದವು. ಆದರೆ ಗ್ರಾಹಕ ಹಿತರಕ್ಷಣಾ ಕಾಯಿದೆ 1986 ಜಾರಿಯಿಂದಾಗಿ ಅದು "ಮಾರುವವನು ಎಚ್ಚರ" ಎಂದು ಗ್ರಾಹಕರನ್ನು ರಕ್ಷಿಸಲು ಒಂದು ಅಮೂಲ್ಯ ಕವಚವಾಗಿದೆ ಎಂದರು. "ಬುದ್ದಿವಂತ ಗ್ರಾಹಕನೇ ದೇಶದ ಆಸ್ತಿ" ಗ್ರಾಹಕರ ಜಾಗೃತಿಯಿಂದ ದೇಶದ ಪ್ರಗತಿ ಎಂದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಗ್ರಾಹಕನಾಗುವುದು ಅತ್ಯಾವಶ್ಯಕ. ಗ್ರಾಹಕ ಜಾಗೃತನಾಗಿದ್ದರೆ ಆತ ಎಂದಿಗೂ ಮೋಸ ಹೋಗಲು ಸಾದ್ಯವಿಲ್ಲ ಗ್ರಾಹಕರ ಹಕ್ಕಿನ ಕುರಿತು ತಿಳಿದು ಅದರ ಸದೂಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ವೇತಾ ಎಂ. ಬಿ. ರವರು ಮಾತನಾಡುತ್ತಾ ಗ್ರಾಹಕರು ಜಾಗೃತರಾಗುವುದು ತುಂಬಾ ಅವಶ್ಯವಾಗಿದೆ ಕೇವಲ ಪ್ರಚಾರಗಳಿಂದ ವಸ್ತುಗಳನ್ನು ಖರೀದಿಸದೆ ಅವುಗಳ ಗುಣಮಟ್ಟದ ಬಗ್ಗೆ ಜಾಗೃತವಹಿಸುವುದು ಮುಖ್ಯ ಮತ್ತು ಗ್ರಾಹಕರು ತಾವು ಖರೀದಿಸುವ ವಸ್ತುವಿನಲ್ಲಿ ಕಂಡುಬರುವ ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಶುದ್ದತೆಯಲ್ಲಿರುವ ಲೋಪ ಹಾಗೂ ಇತರೆ ದೋಷ ಕಂಡುಬಂದಲ್ಲಿ ಅದಕ್ಕೆ ಕಾರಣವಾದ ವ್ಯಕ್ತಿ ಮತ್ತು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗಿದೆ, ಪ್ರತಿಯೊಬ್ಬ ಗ್ರಾಹಕನು ಜಾಗೃತನಾಗಬೇಕಾದರೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ತುಂಬಾ ಇದೆ, ವಿದ್ಯಾಥರ್ಿ ದಿಶೆಯಲ್ಲಿ ಕಲಿತ ವಿಷಯಗಳು ಮಕ್ಕಳ ಮನದಾಳದಲ್ಲಿ ಉಳಿಯುತ್ತವೆ. ಆದ್ದರಿಂದ ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರುತಿ.ನಾ.ಹರಿಜನ ರವರು ಉಪನ್ಯಾಸ ನೀಡಿದರು. ಮಕ್ಕಳ ಸಹಾಯವಾಣಿಯ ಸಂಯೋಜಕರಾದ ಮಂಜುನಾಥ ರಾಯದುರ್ಗದ. ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿಯಾದ ಶಿವಾನಂದ ಗದಿಗೆರ, ಕಾಲೇಜು ಬೋದಕ ಸಿಬ್ಬಂದಿ ವರ್ಗ ಹಾಗೂ ಉಪಸ್ಥಿತರಿದ್ದರು, ಕು. ಗೀತಾ ಪ್ರಾಥರ್ಿಸಿದರು, ಶಿವನಂದ ಸ್ವಾಗತ, ವಂದನಾರ್ಪಣೆ ಹಾಗೂ ನಿರೂಪಿಸಿದರು.