ಮುತ್ತು ಉತ್ಪತ್ತಿ ಆಯಿತು ಶಿಶುವಿಗೆ ಹಾಲೇರಿಯಿತಲೇ ಪರಾಕ್ : ಗೊರವಯ್ಯ ನೀಲಪ್ಪ
The pearl was produced, the baby was breastfed and the strength was there: Goravayya Nilappa
ಲೋಕದರ್ಶನ ವರದಿ
ಶಿಗ್ಗಾವಿ 27: ಮುತ್ತು ಉತ್ಪತ್ತಿ ಆಯಿತು ಶಿಶುವಿಗೆ ಹಾಲೇರಿಯಿತಲೇ ಪರಾಕ ಇದು ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ್ ಜಾತ್ರೆಯಲ್ಲಿ ಗ್ರಾಮದ ಗೊರವಯ್ಯ ನೀಲಪ್ಪ ಮಾಕಪ್ಪನವರ ನುಡಿದ ಕಾರ್ಣಿಕ ನುಡಿ. ಇದರ ಅರ್ಥ ಈ ವರ್ಷ ಮಳೆ ಬೆಳೆ ಚನ್ನಾಗಿ ಆಗಿ ಎಲ್ಲರಿಗೂ ಒಳ್ಳೆಯದಾಗುವದು ಎಂಬುದು ಕಾರ್ಣಿಕದ ತಾತ್ಪರ್ಯ ಎಂದು ನೆರೆದ ಭಕ್ತ ಸಮೂಹ ವಿಮರ್ಶೆ ಮಾಡಿದರು. ನಂತರ ಮೈಲಾರಲಿಂಗೇಶ್ವರ ದೇವಸ್ಥಾನದ ಎದುರಿಗೆ ಗ್ರಾಮದ ಗೊರವಯ್ಯರಾದ ಮಾಲತೇಶ ಓಲೇಕಾರ, ಮಂಜುನಾಥ ಭೀಮನವರ, ದೇವೇಂದ್ರ್ಪ ಕಾಳಿ, ಅಣ್ಣಯ್ಯ ಪೂಜಾರ,ಶಿವುಕುಮಾರ ಸುಣಗಾರ, ನಿಂಗಪ್ಪ ಕಾಳಿ ಅವರು ಕಬ್ಬಿಣದ ಸರಪಳಿಗಳನ್ನು ಹರೆಯುದರ ಮೂಲಕ ಸರಪಳಿ ಪವಾಡ ನಡೆಸಿದರು. ನಂತರ ಮಹಾಪ್ರಸಾದ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಧರ್ಮಣ್ಣ ಕಿವುಡನವರ, ಶಿವಪ್ಪ ಸಂಜೀವಣ್ಣವರ, ಹೇಮಂತ ಮೋದಿ, ಪ್ರತೀಕ ಮೋದಿ, ಶರೀಫ ಮಾಕಪ್ಪನವರ, ರುದ್ರಗೌಡ ಪಾಟೀಲ,ಮಲ್ಲಿಕಾರ್ಜುನ ಅಗಸರ, ರುದ್ರ್ಪ ಕಾಳಿ,ಮಂಜುನಾಥ ಪೂಜಾರ, ಮಾಲತೇಶ ಕುಲಕರ್ಣಿ, ಶಿವುಪುತ್ರಯ್ಯ ಪೂಜಾರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಭಕ್ತಾದಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 