ಮುತ್ತು ಉತ್ಪತ್ತಿ ಆಯಿತು ಶಿಶುವಿಗೆ ಹಾಲೇರಿಯಿತಲೇ ಪರಾಕ್ : ಗೊರವಯ್ಯ ನೀಲಪ್ಪ

ಮುತ್ತು ಉತ್ಪತ್ತಿ ಆಯಿತು ಶಿಶುವಿಗೆ ಹಾಲೇರಿಯಿತಲೇ ಪರಾಕ್ :  ಗೊರವಯ್ಯ ನೀಲಪ್ಪ The pearl was produced, the baby was breastfed and the strength was there: Goravayya Nilappa

ಲೋಕದರ್ಶನ ವರದಿ 

    ಶಿಗ್ಗಾವಿ  27: ಮುತ್ತು ಉತ್ಪತ್ತಿ ಆಯಿತು ಶಿಶುವಿಗೆ ಹಾಲೇರಿಯಿತಲೇ ಪರಾಕ ಇದು ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ್ ಜಾತ್ರೆಯಲ್ಲಿ ಗ್ರಾಮದ ಗೊರವಯ್ಯ ನೀಲಪ್ಪ ಮಾಕಪ್ಪನವರ  ನುಡಿದ ಕಾರ್ಣಿಕ ನುಡಿ.   ಇದರ ಅರ್ಥ ಈ ವರ್ಷ ಮಳೆ ಬೆಳೆ ಚನ್ನಾಗಿ ಆಗಿ ಎಲ್ಲರಿಗೂ ಒಳ್ಳೆಯದಾಗುವದು ಎಂಬುದು ಕಾರ್ಣಿಕದ ತಾತ್ಪರ್ಯ ಎಂದು ನೆರೆದ ಭಕ್ತ ಸಮೂಹ ವಿಮರ್ಶೆ ಮಾಡಿದರು. ನಂತರ ಮೈಲಾರಲಿಂಗೇಶ್ವರ ದೇವಸ್ಥಾನದ ಎದುರಿಗೆ ಗ್ರಾಮದ ಗೊರವಯ್ಯರಾದ ಮಾಲತೇಶ ಓಲೇಕಾರ, ಮಂಜುನಾಥ ಭೀಮನವರ, ದೇವೇಂದ್ರ​‍್ಪ ಕಾಳಿ, ಅಣ್ಣಯ್ಯ ಪೂಜಾರ,ಶಿವುಕುಮಾರ  ಸುಣಗಾರ, ನಿಂಗಪ್ಪ ಕಾಳಿ ಅವರು ಕಬ್ಬಿಣದ ಸರಪಳಿಗಳನ್ನು ಹರೆಯುದರ ಮೂಲಕ ಸರಪಳಿ ಪವಾಡ ನಡೆಸಿದರು. ನಂತರ ಮಹಾಪ್ರಸಾದ ಜರುಗಿತು.    ಈ ಸಂದರ್ಭದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಧರ್ಮಣ್ಣ ಕಿವುಡನವರ, ಶಿವಪ್ಪ ಸಂಜೀವಣ್ಣವರ, ಹೇಮಂತ ಮೋದಿ, ಪ್ರತೀಕ ಮೋದಿ, ಶರೀಫ ಮಾಕಪ್ಪನವರ, ರುದ್ರಗೌಡ ಪಾಟೀಲ,ಮಲ್ಲಿಕಾರ್ಜುನ ಅಗಸರ, ರುದ್ರ​‍್ಪ ಕಾಳಿ,ಮಂಜುನಾಥ ಪೂಜಾರ, ಮಾಲತೇಶ ಕುಲಕರ್ಣಿ, ಶಿವುಪುತ್ರಯ್ಯ ಪೂಜಾರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಭಕ್ತಾದಿಗಳು ಇದ್ದರು.