ಹಗಲು ಹೊತ್ತಿನಲ್ಲೇ ಮಹಿಳೆ ಕೊರಳಲ್ಲಿಯ ಸರ ಕದ್ದು ಪರಾರಿಯಾದ ಖದೀಮರು
The men who stole a chain from a woman in broad daylight and fled
ಬೆಳಗಾವಿ 06: ನಗರದ ಹನುಮಾನಗರದಲ್ಲಿ ಮಹಿಳೆಯ ಕೊರಳಲ್ಲಿಯ ಬಂಗಾರದ ಸರವನ್ನು ಖದೀಮರು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಶುಕ್ರವಾರ ಸಂಜೆ 4.30 ಕ್ಕೆ ಈ ಘಟನೆ ನಡೆದಿದ್ದು, ನಗರದ ವಿಶೇಷವಾಗಿ ಹೊರವಲಯದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.
ಸಂಜೆ ಮಹಿಳೆಯೊಬ್ಬರು ತಮ್ಮ ಬೈಕ್ ಮೇಲೆ ಹನುಮಾನನಗರದ ಟಿವಿ ಸೆಂಟರ್ ಡಬಲ್ ರಸ್ತೆಯಲ್ಲಿ ನಿಧಾನವಾಗಿ ಹೊರಟಿದ್ದರು. ಮಾಜಿ ಶಾಸಕ ಫಿರೋಜ್ ಸೇಟ್ ಅವರ ನಿವಾಸದ ಬಳಿ ಈ ಮಹಿಳೆಯನ್ನು ಬೆನ್ನಟ್ಟಿ ಬಂದ ಇಬ್ಬರು ಮೋಟರ ಸೈಕಲ್ ಸವಾರರು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡಿದ್ದಾರೆ. ಆಕೆ ಚಿರಾಡಿದಾಗ ಬೈಕ್ ಸವಾರರು 20 ಗ್ರಾಂ ಬಂಗಾರದ ಸರದೊಂದಿಗೆ ಪರಾರಿಯಾಗಿದ್ದಾರೆ.
ಈ ಬೈಕ್ ಸವಾರರ ಪತ್ತೆಗಾಗಿ ನಗರದ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ. ಈ ಹಿಂದೆ ಸಂಜೆ ಮಬ್ಬುಗತ್ತಲಲ್ಲಿ ಅಥವಾ ರಾತ್ರಿ ವೇಳೆ ಹೊರವಲಯಗಳಲ್ಲಿ ಮತ್ತು ದೇವಸ್ಥಾನಗಳ ಬಳಿ ಸರಗಳ್ಳತನ ನಡೆದ ಉದಾಹರಣೆಗಳಿವೆ.
ಈ ಘಟನೆ ಮಹಿಳೆಯರಲ್ಲಿ ಗಾಬರಿ ಹುಟ್ಟಿಸಿದೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 