ಬಿಸಿ ಪಾತ್ರೆ ಬಿದ್ದು ಬಾಲಕನ ಕಾಲಿಗೆ ಗಾಯ
ಲೋಕದರ್ಶನವರದಿ
ಶಿಗ್ಗಾವಿ 22: ಮಕ್ಕಳಿಗೆ ಊಣಬಡಿಸಲು ತಯಾರಿಸಿದ ಬಿಸಿ ಊಟ ಬಾಲಕನೋರ್ವನ ಪಾದದ ಮೇಲೆ ಬಿದ್ದು ಗಾಯಗೊಂಡ ಘಟನೆ ತಾಲೂಕಿನ ಬಂಕಾಪುರ ಪಟ್ಟಣದ ನರೇಗಲ್ರ ಓಣಿಯ ಅಂಗನವಾಡಿ ಕೇಂದ್ರ ಸಂಖ್ಯೆ 74 ರಲ್ಲಿ ಶನಿವಾರದಂದು ಸಂಭವಿಸಿದೆ.
ಗಾಯಗೊಂಡ ಬಾಲಕನನ್ನು ಆದರ್ಶ ಬೀರಪ್ಪ ಬನ್ನಿಮಟ್ಟಿ ಎಂದು ತಿಳಿದುಬಂದಿದೆ. ಮಕ್ಕಳು ಊಟ ಮಾಡುವ ಸಮಯದಲ್ಲಿ ಕೇಂದ್ರದಲ್ಲಿದ್ದು, ನಿಗಾವಹಿಸಬೇಕಾದ ಶಿಕ್ಷಕಿ ಹೊರಗಡೆ ಹೋದ ಸಂದರ್ಭದಲ್ಲಿ ಸಹಾಯಕಿ ನಾಗಮ್ಮ ಕಳ್ಳಿಮನಿ ಬಿಸಿಊಟ ತಯಾರಿಸಿ ಹೊರಗಡೆ ಹೋದ ಕೆಲವು ಮಕ್ಕಳನ್ನು ಒಳಗೆ ಊಟಕ್ಕೇ ಕರೆ ತರಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಪಾಲಕರು ಅಂಗನವಾಡಿ ಕೇಂದ್ರಕ್ಕೇ ಮುತ್ತಿಗೆಹಾಕಿ ಬೇಜವಾಬ್ದಾರಿ ಶಿಕ್ಷಕಿ ಹಾಗು ಸಹಾಯಕಿಯರನ್ನು ತರಾಟೆಗೆ ತೆಗೆದುಕೋಂಡು ಅಂಗನವಾಡಿ ಕೇಂದ್ರಕ್ಕೇ ಬೀಗ ಜಡಿದು ಆಕ್ರೋಶ ವ್ಯಕ್ತಪಡೆಸಿದರು.
ಸುಟ್ಟು ಘಾಯಗೊಂಡ ಬಾಲಕನಿಗೆ ಪಾಲಕರು ಖಾಸಗಿ ಆಸ್ಪತ್ರೆಯೋಂದರಲ್ಲಿ ಚಿಕಿತ್ಸೆ ಕೋಡಿಸುತ್ತಿದ್ದಾರೆ.
ಸಂಬಂಧ ಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೇ ಬೇಟಿ ನೀಡಿ ತಪ್ಪಿತಸ್ತ ಶಿಕ್ಷಕಿ ಹಾಗು ಸಹಾಯಕಿ ಮೇಲೆ ಸೂಕ್ತ ಕ್ರಮ ಜರುಗಿಸುವವರೆಗೆ ಅಂಗನವಾಡಿ ಕೇಂದ್ರಕ್ಕೇ ಹಾಕಿದ ಬೀಗ ತೆಗೆಯುವದಿಲ್ಲವೆಂದು ಬಾಲಕನ ತಂದೆ ಬೀರಪ್ಪ ಬನ್ನಿಮಟ್ಟಿ ಎಚ್ಚರಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 