ಕತ್ತರಿ ಹಿಡಿಬೇಕಾದ ಕೈ ಇಂದು ಬಂದೂಕು ಹಿಡಿದು ದೇಶ ಕಾಯುವ ಜವಾನ ಕುರುಮಯ್ಯ ಬಾರ್ಬರ್
The hand that should have held the scissors is today the soldier who holds the gun and protects the
ಗದಗ 18: ಬೆವರಿನ ದುಡಿಮೆಗೆ ಜಗತ್ತಿನಲ್ಲಿ ಅತ್ಯುನ್ನತ ಗೌರವವಿದೆ. ಸಮಾಜದ ಒಂದು ವರ್ಗ ಕಣ್ಣಿನಲ್ಲಿ ಕ್ಷೌರಿಕ ವೃತ್ತಿಯನ್ನು ಕೀಳಾಗಿ ಕಾಣುತ್ತಿರಬಹುದು, ಆದರೆ ಅದೇ ವೃತ್ತಿಯ ಪ್ರಾಮಾಣಿಕ ಗಳಿಕೆಯಿಂದ ಇಂದು ದೇಶ ಕಾಯುವ ವೀರ ಸೈನಿಕನೊಬ್ಬ ಜನ್ಮತಾಳಿದ್ದಾನೆ. ಕಾಯಕ ನಿಷ್ಠೆ ಮತ್ತು ದೇಶಪ್ರೇಮದ ಮುಂದೆ ಯಾವುದೇ ಶೋಷಣೆ ಅಥವಾ ಕೀಳುರಿಮೆ ನಿಲ್ಲಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಸವಿತಾ ಸಮಾಜದ ಹೆಮ್ಮೆಯ ಸಾಧಕರಾದ ಕುರುಮಯ್ಯ ಬಾರ್ಬರ್ ಅವರು ಸಾಬೀತುಪಡಿಸಿದ್ದಾರೆ, ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಅತ್ಯಂತ ಹೆಮ್ಮೆಯಿಂದ ಹರ್ಷ ವ್ಯಕ್ತಪಡಿಸಿ ಹೇಳಿದರು. ಶಿರಹಟ್ಟಿ ಸವಿತಾ ಸಮಾಜದ ಮುಖಂಡರು ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಸಂಚಾಲಕರಾದ ಕುರುಮಯ್ಯ ಬಾರ್ಬರ್ ಅವರ ಸುಪುತ್ರ ನಾಗರಾಜ ಬಾರ್ಬರ್ ಅವರು ಭಾರತೀಯ ಸೇನೆಗೆ ಆಯ್ಕೆಯಾಗಿರುವ ಐತಿಹಾಸಿಕ ಹಿನ್ನೆಲೆಯಲ್ಲಿ, ಜಿಲ್ಲಾ ಸವಿತಾ ಸಮಾಜದ ವತಿಯಿಂದ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 