ವಿಜೃಂಭಣೆಯಿಂದ ನಡೆದ ವಿದ್ಯಾಸಿಂಧು ಮಾಧವ ತೀರ್ಥರ ಶೋಭಾಯಾತ್ರೆ
The grand procession of Vidyasindhu Madhava Tirtha
ಬಳ್ಳಾರಿ 10 : ನಗರದ ಪ್ರಮುಖ ಬೀದಿಗಳಲ್ಲಿ ಪರಮಪೂಜ್ಯ 108 ವಿದ್ಯಾಸಿಂಧು ಮಾಧವ ತೀರ್ಥರ 11ನೇ ಚಾತುರ್ಮಾಸ ವ್ರತದ ಪ್ರಯುಕ್ತ ಶನಿವಾರ ಸಂಜೆ ಶೋಭಾಯಾತ್ರೆ ಹಾಗೂ ಮೆರವಣಿಗೆ ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಶೋಭಾಯಾತ್ರೆಯಲ್ಲಿ ಲಕ್ಷ್ಮೀನಾರಾಯಣ ದೇವಾಲಯದ ಆಡಳಿತಾಧಿಕಾರಿ ಪಾಂಡುರಂಗ ಹಾಗೂ ಪ್ರಧಾನ ಅರ್ಚಕರಾದ ಸುಧೀಂದ್ರ ಆಚಾರ್ಯ, ಸುಶೀಲೇಂದ್ರ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ, ಅನಿಲ್ ಜೋಶಿ, ಬಿಂದು ಮಾಧವ ರಾವ್, ಬಜಾರ್ ಹರಿಪ್ರಸಾದ್, ರಮೇಶ್ ರಾವ್ ಕುಲಕರ್ಣಿ, ಕೃಷ್ಣ ಆಚಾರ್ಯ, ವಿಠ್ಠಲ, ಅಜಿತ್ ಕುಮಾರ್, ಪಾಂಡುರಂಗ ಆಚಾರ್ಯ, ಅನಂತಪದ್ಮನಾಭ, ರಘುನಂದನ, ಮಧುರನಾಥ್, ಎಸ್.ಕೆ. ಸುಧೀ ಹಾಗೂ ಸುಮ್ಮಾ ಸುಧೀಂದ್ರ, ಅರುಣ್ ಸುಶೀಲೇಂದ್ರ, ಅಂಬುಜಾ, ವಿದ್ಯಾ ಸೇರಿದಂತೆ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಮಂಗಳವಾದ್ಯಗಳ ನಾದದೊಂದಿಗೆ ನಡೆದ ಮೆರವಣಿಗೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 