ಜಿನ್ನಾ ಸಮಾಧಿ ಮೇಲಿನ ಸುವರ್ಣಾಕ್ಷರ : ಮೋದಿಗೆ ಟಿಎಂಸಿ ತಿರುಗೇಟು
ನವದೆಹಲಿ, ಡಿ11 : ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಕುರಿತು ಚರ್ಚೆ ಕುರಿಯ ಬಿಸಿ, ಬಿಸಿ ಚರ್ಚೆ ಶರುವಾಗಿದೆ ಈ ಮಸೂದೆ ಭಾರತದ ಸಂವಿಧಾನದ ಮೇಲಿನ ಅತಿದೊಡ್ಡ ಆಕ್ರಮಣ ಎಂದು ಪ್ರತಿಪಕ್ಷಗಳು ಕಟು ಟೀಕೆ ಮಾಡಿವೆ.
ಮಸೂದೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ನ ಡೆರೆಕ್ ಒ'ಬ್ರಿಯಾನ್ ತೀವ್ರ ವಾಗ್ದಾಳಿ ನಡೆಸಿ 'ಇದನ್ನು ಸುವರಣಾಕ್ಷರದಲ್ಲಿ ಬರೆದಿಡುವಂತಹದ್ದು ಎಂದು ಪ್ರಧಾನಿ ಹೇಳಿರುವುದನ್ನು ನಾನು ಓದಿದ್ದೇನೆ, ಕೇಳಿದ್ದೇನೆ ಎಂದರು.
ಅದನ್ನು ಎಲ್ಲಿ ಬರೆಯಲಾಗಿದೆ, ಬರೆಯಬಹುದು ಎಂದು ನಾನು ಸದನಕ್ಕೆ ಹೇಳುತ್ತೇನೆ ರಾಷ್ಟ್ರಪಿತನ ಸಮಾಧಿಯ ಮೇಲೆ ಬರೆಯಲಾಗುವುದು, ಆದರೆ ಯಾವ ರಾಷ್ಟ್ರಪಿತ ಗೊತ್ತೆ? ಕರಾಚಿಯಲ್ಲಿ ಇರುವ , ಪಾಕ್ ಸಂಸ್ಥಾಪಕ ಜಿನ್ನಾ ಸಮಾಧಿಯ ಮೇಲೆ 'ಎಂದು ಅವರು ಹೇಳಿದರು.
ಈ ಕುರಿತು ಸಂಸದರಿಗೆ ತಿಳಿ ಹೇಳಿದ್ದ ಮೋದಿ ಅವರು ಸಂಸದೀಯ ಸಭೆಯಲ್ಲಿ ಮಸೂದೆ ನಿಜವಾಗಿಯೂ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದೂ ಹೇಳಿದ್ದರು ಇದಕ್ಕೆ ಟಿಎಂ ಸಿ ನಾಯಕ ಡೆರೆಕ್ ಈ ರೀತಿ ತಿರುಗೇಟು ನೀಡಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 