ಭಾರತ, ಅಮೆರಿಕಾದಲ್ಲಿ ಸಹಿಷ್ಣುತೆಯ ಗುಣ ಕಣ್ಮರೆಯಾಗುತ್ತಿದೆ: ರಾಹುಲ್ ಗಾಂಧಿ
ನವದೆಹಲಿ, ಜೂನ್ ೧೨,ಸಹಿಷ್ಣುತೆ ಎಂಬ ಗುಣ ಎರಡೂ ದೇಶಗಳಿಂದ ಕಣ್ಮರೆಯಾಗುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಶುಕ್ರವಾರ ಅಮೆರಿಕಾದ ಮಾಜಿ ರಾಜತಾಂತ್ರಿಕ ನಿಕೋಲಸ್ ಬರ್ನ್ಸ್ ಅವರೊಂದಿಗಿನ ವಿಡಿಯೋ ಕಾನ್ಪರೆನ್ಸ್ ಸಂವಾದದ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮದು ಸಹಿಷ್ಣು ವ್ಯವಸ್ಥೆ ಗಳಾಗಿರುವ ಕಾರಣ ನಮ್ಮ ಸಹಭಾಗಿತ್ವ ಸಾಧ್ಯವಾಗಿದೆ, ನೀವು(ಬರ್ನ್ಸ್) ಹೇಳಿದಂತೆ ನಿಮ್ಮದು ವಲಸೆ ರಾಷ್ಟ್ರ. ನಮ್ಮದು ಸಹಿಷ್ಣುತೆಯ ದೇಶ ನಮ್ಮ ಡಿಎನ್ಎಯಲ್ಲಿಯೇ ಸಹಿಷ್ಣುತೆ ಮೇಳೈಸಿದೆ. ನಾವು ಮುಕ್ತವಾಗಿರಬೇಕು ಆದರೆ, ಮುಕ್ತತತೆಯ ಗುಣ ನಮ್ಮೆರಡೂ ದೇಶಗಳಿಂದಲೂ ಕಣ್ಮರೆಯಾಗುತ್ತಿದೆ. ನಾನು ಈ ಮಟ್ಟದ ಅಸಹಿಷ್ಣತೆಯನ್ನು ನಾನೆಂದೂ ನೋಡಿರಲಿಲ್ಲ ಎಂದು ಹೇಳಲು ದುಃಖವಾಗುತ್ತಿದೆ. ಸಹಿಷ್ಣತೆಯನ್ನು ಅಮೆರಿಕಾದಲ್ಲೂ ನೋಡಲು ಸಾಧ್ಯವಿಲ್ಲ. ಅದು ಭಾರತದಲ್ಲಿ ಕಾಣುವುದಿಲ್ಲಎಂದು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಂವಾದದಲ್ಲಿ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 