ಸೇವಾ ನಿವೃತ್ತ ಪಿಡಿಓ ಹಿರೇಮಠ ಹಾಗೂ ಕಲಹಾರಿಗೆ ಬೀಳ್ಕೊಡುವ ಸಮಾರಂಭ
The department has always done a memorable job: EO Masali
ಇಲಾಖೆ ಸದಾ ಸ್ಮರಿಸುವ ಹಾಗೆ ಕೆಲಸ ಮಾಡಿದ್ದಾರೆ: ಇಒ ಮಸಳಿ
ತಾಳಿಕೋಟಿ: ತಾಲೂಕಿನ ಹಿರೂರ ಗ್ರಾಮ ಪಂಚಾಯತ್ ಪಿಡಿಒ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಚನಬಸಯ್ಯ ಮಠ ಹಾಗೂ ತುಂಬಗಿ ಗ್ರಾಪಂ ನಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ನಿಂಗಪ್ಪ ಕಲಹಾರಿ ಇವರು ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ತಮ್ಮ ಸೇವೆಯನ್ನು ಪೂರ್ತಿಗೊಳಿಸಿ ಇಂದು ನಿವೃತ್ತ ರಾಗುತ್ತಿದ್ದಾರೆ ಆರಿ್ಡ.ಪಿ.ಆರ್. ಇಲಾಖೆಯಲ್ಲಿ ಸೇವೆಯನ್ನು ಮಾಡುವುದು ಸುಲಭ ಕಾರ್ಯವಲ್ಲ ಇಲ್ಲಿ ಸಾರ್ವಜನಿಕರ ಹಲವಾರು ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ ಇದರ ಮಧ್ಯೆಯು ಈ ಇಬ್ಬರು ತಮ್ಮ ಪ್ರಾಮಾಣಿಕ ಸೇವೆಯಿಂದ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಅವರಿಬ್ಬರ ವಿಶ್ರಾಂತ ಬದುಕು ನೆಮ್ಮದಿದಾಯಕವಾಗಿರಲೆಂದು ಹಾರೈಸುತ್ತೇನೆ ಎಂದು ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ ಹೇಳಿದರು.
ಹಿರೂರ ಪಿಡಿಒ ಚನಬಸಯ್ಯ ಮಠ ಹಾಗೂ ತುಂಬಗಿ ಗ್ರಾಪಂ ಕಾರ್ಯದರ್ಶಿ ನಿಂಗಪ್ಪ ಬಿ.ಕಲಹಾರಿ ಇವರು ಸೇವಾ ನಿವೃತ್ತಿ ಹೊಂದಿದ ನಿಮಿತ್ಯ ತಾಲೂಕ ಪಂಚಾಯತ್ ಹಾಗೂ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ತಾಳಿಕೋಟಿ ತಾಲೂಕ ಘಟಕದ ಸಹಯೋಗದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ ಸನ್ಮಾನ ಹಾಗೂ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ ಮಾತನಾಡಿ ಇಂದು ನಿವೃತ್ತರಾದ ಇಲಾಖೆಯ ಈ ಇಬ್ಬರು ಹಿರಿಯರು ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮಿತ ಭಾಷಿ ಸ್ವಭಾವದವರಾಗಿದ್ದು ಇಲಾಖೆ ಅಪಾರ ಅನುಭವ ಹೊಂದಿದವರಾಗಿದ್ದರು ಅವರ ಕರ್ತವ್ಯ ನಿಷ್ಠೆ ಸಮಯ ಪಾಲನೆ ಹಾಗೂ ಶಿಸ್ತು ನಮಗೆಲ್ಲರಿಗೂ ಮಾದರಿ ಯೋಗ್ಯವಾಗಿದೆ, ಅವರ ವಿಶ್ರಾಂತ ಜೀವನ ಸುಖಕರವಾಗಿರಲೆಂದು ಹಾರೈಸುತ್ತೇನೆ ಎಂದರು.
ಪಿಡಿಒಗಳಾದ ಬಿ.ಎಂ.ಸಾಗರ, ಅನೀಲಕುಮಾರ ಕಿರಣಗಿ, ಬಸನಗೌಡ ಚೌಧರಿ, ಪ್ರಭು ಚೆನ್ನೂರ, ಸಿಒ ಸಂಘದ ಅಧ್ಯಕ್ಷ ಮಹಾಂತೇಶ ಬಿರಾದಾರ ಮಾತನಾಡಿದರು. ನಿವೃತ್ತ ಪಿಡಿಒ ಮಠ ಹಾಗೂ ಕಾರ್ಯದರ್ಶಿ ಕಲಹಾರಿ ಇವರನ್ನು ಕುಟುಂಬ ಸಮೇತವಾಗಿ ತಾಪಂ ಕಾರ್ಯಾಲಯ, ಪಿಡಿಒ ಕ್ಷೇಮಾಭಿವೃದ್ಧಿ ಸಂಘ, ಗಣಕಯಂತ್ರ ಆಪರೇಟರ್ ಸಂಘ ಹಾಗೂ ಬಂಟನೂರ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು, ಪಿಡಿಒಗಳು, ಕಾರ್ಯದರ್ಶಿಗಳು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿಗಳು ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 