ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ
The contribution of Veerashaiva monasteries to the field of education is immense.
ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ
ಹೂವಿನ ಹಡಗಲಿ 9 : ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದೆಂದು ವೀರಶೈವ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರಗತಿಗೆ ಶ್ರಮಿಸಿವೆ ಎಂದು ಅಭಿನವ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಪುರ ಗ್ರಾಮದಲ್ಲಿ ಶನಿವಾರ ನೂಲ ಹುಣ್ಣಿಮೆ ಅಂಗವಾಗಿ 133 ನೇ ಮಾಸಿಕ ಧರ್ಮ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.ಶಿವನಕಟ್ಟೇಶ್ವರ ಕಲಾ ಟ್ರಸ್ಟ್ ನ ಅಧ್ಯಕ್ಷ ಆರ್ ಜಿ ನಾಗರಾಜ. ಪತ್ರಕರ್ತರಾದ ಎಂ ಪಿ ಎಂ ಶಿವಪ್ರಕಾಶ್ ಎಂ ದಯಾನಂದ ಮಾತನಾಡಿದರು.ವೇದ ಮೂರ್ತಿ ಪಿ ಕೆ ಎಂ ವಿಶ್ವಾನಂದಸ್ವಾಮಿ, ವಿ ಸಿ ಪಾಟೀಲ್, ಗಡ್ಡಿ ಗುಡ್ಡಪ್ಪ, ಎನ್ ಸುಧಾಕರ, ಕರಿಶೆಟ್ಟಿ ಬಸವರಾಜ ನಿವೃತ್ತ ಮುಖ್ಯ ಗುರು ಎಂ ಪಿ ಎಂ ಕೊಟ್ರಯ್ಯ ಇದ್ದರು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ ಪಿ ಎಂ ಶಿವಪ್ರಕಾಶ್, ಎಂ ದಯಾನಂದ, ಸೋವೇನಹಳ್ಳಿಯ ಹೆಚ್ ಎಂ ಚಂದ್ರಶೇಖರಯ್ಯ ಶಾಸ್ತ್ರಿ,ಪುರದ ನಿವೃತ್ತ ಶಿಕ್ಷಕ ಕಾಗನೂರು ರಂಗಪ್ಪ, ಗಿರಿಮಲ್ಲಿಗೆ ಸಹಕಾರಿ ಅಧ್ಯಕ್ಷೆ ಸವಿತಾ ಅಂಗಡಿ ರವರಿಗೆ ಗುರುರಕ್ಷೆ ನೀಡಿ ಸತ್ಕರಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋವೇನಹಳ್ಳಿಯ ಶ್ರೀ ಶಿವನಕಟ್ಟೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.ಗೌರೀಶ ಅಂಗಡಿ, ಪ್ರಭು ಸೊಪ್ಪಿನ, ಡಿ ಮೇಘರಾಜ ನಾಯ್ಕ ನಿರೂಪಿಸಿದರು.ಕಂದಗಲ್ಲಿನ ಶ್ರೀ ಗೋಣಿ ಬಸವೇಶ್ವರ ಭಜನಾ ಸಂಘದವರು ಸಂಗೀತ ಸೇವೆ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 