ಪಟ್ಟಣ ಸ್ವಚ್ಛವಾಗಿರಲು ಪೌರ ಕಾರ್ಮಿಕರ ಶ್ರಮ ಕಾರಣ: ನಿಖಿಲ ಪಾಟೀಲ

ಪಟ್ಟಣ ಸ್ವಚ್ಛವಾಗಿರಲು ಪೌರ ಕಾರ್ಮಿಕರ ಶ್ರಮ ಕಾರಣ: ನಿಖಿಲ ಪಾಟೀಲ The city is clean thanks to the hard work of civic workers: Nikhil Patil

ಯರಗಟ್ಟಿ, 23 ; ‘ಪಟ್ಟಣ ಸ್ವಚ್ಛವಾಗಿರಲು ಪೌರ ಕಾರ್ಮಿಕರ ಶ್ರಮ ಕಾರಣ’ ಎಂದು ಪ ಪಂ ಸದಸ್ಯ ನಿಖಿಲ ಪಾಟೀಲ ಹೇಳಿದರು. 

ಪಟ್ಟಣ ಪಂಚಾಯಿತಿ  ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಪಟ್ಟಣದ ಸ್ವಚ್ಛತೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ಭಜಂತ್ರಿ ಅವರ ಕಾರ್ಯ ಶ್ಲಾಘನೀಯ ಎಂದರು. 

ಪಟ್ಟಣ ಪಂಚಾಯಿತಿ ಸದಸ್ಯ ಹನಮಂತ ಹಾರೂಗೊಪ್ಪ ಮಾತನಾಡಿ,‘ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ವೈದ್ಯರಿದ್ದಂತೆ. ನಿತ್ಯ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು. ನಂತರ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. 

ಪ.ಪಂ. ಕಿರಿಯ ತಾಂತ್ರಿಕ ಅಭಿಯಂತರ ವೆಂಕಟೇಶ ಕಾಮಣ್ಣವರ, ಕಿರಿಯ ಆರೋಗ್ಯ ನೀರಿಕ್ಷಕ ನಾಗರಾಜ ಚವಡಪ್ಪನ್ನವರ, ಸಿಬ್ಬಂದಿ ವರ್ಗದವರಾದ ಕೆ. ಬಿ. ಬೆಣ್ಣಿ ಆನಂದ ಬೆಳವಿ, ಮಹಾದೇವಪ್ಪ ಬಡಿಗೇರಿ, ರಾಜು ಹಿರೇಮಠ, ಪಾರ್ವತಿ ಪಟಣ್ಣಶೆಟ್ಟಿ, ದ್ಯಾಮವ್ವ ಬೂದಗಟ್ಟಿ, ನೇತ್ರಾ ಜಾದವ, ಕೇದಾರ ಬಾಕಳೆ, ಮಲ್ಲಪ್ಪ ಬಾರ್ಕಿ, ಮಾಬುಸುಬಾನಿ ಜಮಾದಾರ ಭಾಗವಹಿಸಿದ್ದರು.