ಮದಲಗಟ್ಟಿ ಆಂಜನೇಯ ಸ್ವಾಮಿಯ ರಥೋತ್ಸವ

ಮದಲಗಟ್ಟಿ ಆಂಜನೇಯ ಸ್ವಾಮಿಯ ರಥೋತ್ಸವ   The chariot festival of Madalagatti Anjaneya Swamy

ಹೂವಿನ ಹಡಗಲಿ  08:  ತಾಲ್ಲೂಕಿನ ಮದಲಗಟ್ಟಿ ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವವು ಭಾನುವಾರ ಸಂಜೆ ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.ರಥೋತ್ಸವಕ್ಕೂ ಮುನ್ನ ಬೆಳಿಗ್ಗೆಯಿಂದಲೇ ಅನೇಕ ಭಾಗಗಳಿಂದ ಭಕ್ತಾದಿಗಳು ತಮ್ಮ ಇಷ್ಟಾರ್ಥ ದೇವರಾದ ಆಂಜನೇಯ ಸ್ವಾಮಿಯ ಹಣ್ಣು-ಕಾಯಿ, ಹೂವುಗಳ ಅರ್ಚನೆ ಮಾಡಿಸಿದರು. ಮಂಗಳಾರತಿ, ಅಭಿಷೇಕಗಳು ನಡೆಯುತ್ತಿದ್ದವು.ಸಂಜೆ ಜರುಗಿದ ರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ ತಮ್ಮ ಭಕ್ತಿ-ಭಾವ ಅರ​‍್ಿಸಿದರು. ರಥೋತ್ಸವವು ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಬಾಳೆಹಣ್ಣು, ಉತ್ತತ್ತಿಗಳನ್ನು ರಥಕ್ಕೆಸೆದು ಕೈ ಮುಗಿದರು.