ಕಡಲ್ಗಳ್ಳರಿಂದ ನಾರ್ವೆ ನೌಕೆಯ 9 ನಾವಿಕರ ಅಪಹರಣ
ಮಾಸ್ಕೋ, ನ 4: ನಾರ್ವೆ ದೇಶದ ಜೆ.ಜೆ. ಉಗ್ಲ್ಯಾಂಡ್ ನೌಕಾ ಕಂಪನಿಗೆ ಸೇರಿದ ಹಡಗಿನ ಮೇಲೆ ಕಡಲ್ಗಳ್ಳರು ದಾಳಿ ನಡೆಸಿ ಅದರಲ್ಲಿದ್ದವರ ಪೈಕಿ 9 ಮಂದಿ ನಾವಿಕ ಸಿಬ್ಬಂದಿಯನ್ನು ಅಪಹರಿಸಿದ್ದಾರೆ ಎಂದು ಕಂಪನಿ ಹೇಳಿದೆ ಶನಿವಾರ ಬೆಳಗ್ಗೆ ಕಡಲ್ಗಳ್ಳರು ಕಂಪನಿಯ ಎಂ.ವಿ. ಬೊನಿಟಾ ಹಡಗು ಪ್ರವೇಶಿಸಿದ್ದಾರೆ. ಸರಕು ಇಳಿಸಲು ಬೆನಿಯನ್ ಬಂದರು ನಗರಿಯ ಕರಾವಳಿಯಲ್ಲಿ ಹಡಗು ಲಂಗರು ಹಾಕಲು ಕಾಯುತ್ತಿದ್ದಾಗ ಹಡಗಿನಲ್ಲಿದ್ದ 9 ನಾವಿಕ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಕಂಪನಿ ಹೇಳಿದೆ. ಉಗ್ಲ್ಯಾಂಡ್ ತುರ್ತು ಪ್ರಕ್ರಿಯಾ ಪಡೆ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದು, ಘಟನೆಯನ್ನು ಸಂಬಂಧ ಪಟ್ಟ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾವಿಕ ಸಿಬ್ಬಂದಿಯ ಕುಟುಂಬಗಳನ್ನು ಸಂಪರ್ಕಿಸಿದ್ದು, ಅವರಿಗೆ ನಿರಂತರ ಮಾಹಿತಿ ಒದಗಿಸಲಾಗುತ್ತಿದೆ. ನಾವಿಕ ಸಿಬ್ಬಂದಿಯ ಹಿತದೃಷ್ಟಿಯಿಂದ ಪರಿಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ನೀಡಲು ಉಗ್ಲ್ಯಾಂಡ್ ನಿರಾಕರಿಸಿದೆ. ಹಡಗಿನಲ್ಲಿದ್ದ ಉಳಿದ ನಾವಿಕ ಸಿಬ್ಬಂದಿ ಬೆನಿಯನ್ ಬಂದರಿಗೆ ಶನಿವಾರ ಸಂಜೆ ಆಗಮಿಸಿದ್ದಾರೆ. ಈ ನಡುವೆ ಅಪಹರಣಕ್ಕೀಡಾಗಿರುವ ಹಡಗಿನ ನಾವಿಕ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಬಂದರು ಅಧಿಕಾರಿಗಳು ತೀವ್ರ ಅನುಕಂಪ ವ್ಯಕ್ತಪಡಿಸಿದ್ದಾರೆ. ಅಪಹರಣದಲ್ಲಿ ನಾರ್ವೆ ದೇಶದ ಯಾವುದೇ ನಾಗರೀಕರು ಭಾಗಿಯಾಗಿಲ್ಲ ಎಂದು ನಾವರ್ೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗುರಿ ಸೋಲ್ ಬರ್ಗ್ ನಾರ್ವೆ ಸುದ್ದಿ ಸಂಸ್ಥೆ( ಎನ್ ಟಿ ಬಿ)ಗೆ ತಿಳಿಸಿದ್ದಾರೆ. ಕಡಲ್ಗಳ್ಳರು ಅಪಹರಿಸಿರುವ ಎಲ್ಲ ನಾವಿಕರು ಫಿಲಿಪಿನ್ಸ್ ರಾಷ್ಟ್ರೀಯರು ಎಂದು ನಾರ್ವೆ ಹಡಗು ಮಾಲೀಕರ ಸಂಘಟನೆಯ ಮೂಲಗಳನ್ನು ಉಲ್ಲೇಖಿಸಿ ನಾರ್ವೆ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 