ರೇಣುಕಾ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು
The Renuka Devi Jatra celebration was celebrated with great pomp
ರೇಣುಕಾ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು
ರಾಯಬಾಗ 15: ತಾಲೂಕಿನ ದಿಗ್ಗೆವಾಡಿ ಗ್ರಾಮದ ಚೌಗುಲೆ ಗಲ್ಲಿಯಲ್ಲಿ ಪ್ರಥಮಬಾರಿಗೆ ರೇಣುಕಾ ದೇವಿ ಜಾತ್ರಾ ಮಹೋತ್ಸವ ಅತೀವಿಜೃಂಭಣೆಯಿಂದ ಇಂದು ಜರುಗಿತು. ಶನಿವಾರದಂದು ಶ್ರೀ ಯಲ್ಲಮ್ಮ ಜಗವನ್ನು ದಿಗ್ಗೇವಾಡಿ ಗ್ರಾಮದಿಂದ ಹಳೇದಿಗ್ಗೆವಾಡಿ ವರೆಗೆ ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಕೃಷ್ಣ ನದಿ ತೀರದಲ್ಲಿ ಮಹಿಳೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಂತರ ಸಂಜೆ ವೇಳೆ ಮಹಾನೈವೇದ್ಯ ಕಾರ್ಯಕ್ರಮ ನಡೆಯಿತು.
ಈ ಸಮಯದಲ್ಲಿ ಸಹಸ್ರಾರು ಭಕ್ತಾಧಿಗಳು ದೇವಿಗೆ ನೈವೇದ್ಯ ತೋರಿಸಿ ತಮ್ಮ ಭಕ್ತಿ ಮೆರೆದರು. ರವಿವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಜರುಗಿತು. ನಂತರ ಸಹಸ್ರಾರು ಭಕ್ತಾಧಿಗಳು ಕಿಚ್ಚ ಹಾಯುವ ಮೂಲಕ ಹರಕೆ ತೀರಿಸಿದರು. ನಂತರ ದಿಗ್ಗೇವಾಡಿ, ಹಳೆದಿಗ್ಗೇವಾಡಿ ಸೇರಿದಂತೆ ಸಹಸ್ರಾರು ಭಕ್ತಾಧಿಗಳು ಮಹಾಪ್ರಸಾದ ಸೇವಿಸಿದರು. ಎಲ್ಲ ಭಕ್ತಾಧಿಗಳು ಭಂಡಾರದಲ್ಲಿ ಮಿಂದೆದ್ದರು.ಈ ವೇಳೆ ಶ್ರೀ ರೇಣುಕಾದೇವಿ ಜಾತ್ರಾ ಕಮಿಟಿಯ ಸದಸ್ಯರು ಗಣ್ಯರು ಉಪಸ್ಥಿತರಿದ್ದರು.ರಾಯಬಾಗ : 6 ಪೋಟೊ ಶಿರ್ಷಿಕೆ ತಾಲ್ಲೂಕಿನ ದಿಗ್ಹೇವಾಡಿ ಗ್ರಾಮದ ಕೃಷ್ಣ ನದಿ ದಡದಲ್ಲಿ ಶ್ರೀರೇಣುಕಾದೇವಿಗೆ ಉಡಿ ತುಂಬುವಾಗ ಹಲವು ಭಕ್ತಾಧಿಗಳು..
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 